ಪ್ರಜಾಸ್ತ್ರ ಸುದ್ದಿ
ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾದ ಇಂದು 29 ಸಾಧಕಿಯರಿಗೆ ನಾರಿ ಶಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಇಬ್ಬರು ಕನ್ನಡಿಗರು ಸೇರಿ 29 ಸಾಧಕಿಯರ ಮುಡಿಗೆ ನಾರಿ ಶಸ್ತಿ ಅವಾರ್ಡ್ ಏರಿತು. ಕರ್ನಾಟಕದಿಂದ ಇಂಟೆಲ್ ಇಂಡಿಯಾ ಮುಖ್ಯಸ್ಥೆ , ಸಾಮಾಜಿಕ ಕಾರ್ಯಕರ್ತೆ, ದೇವದಾಸಿ ಪದ್ಧತಿ ನಿರ್ಮೂಲನೆಗೆ ಶ್ರಮಿಸುತ್ತಿರುವ ಶೋಭಾ ಗಸ್ತಿ ಅವರಿಗೆ ಪಶಸ್ತಿ ಸಂದಿದೆ.
ಇನ್ನು ಅನಿತಾ ಗುಪ್ತಾ, ಉಷಾಬೆನ್ ದಿನೇಶ್ಬಾಯಿ ವಾಸವ, ನಾಸಿರ್ ಅಖ್ತರ್, ಸೈಲಿ ನಂದಕಿಶೋರ್, ವನಿತಾ ಜಗದೀಯೊ.ಬಿ ಸೇರಿದಂತೆ 29 ಸಾಧಕಿಯರಿಗೆ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.