ಪ್ರಜಾಸ್ತ್ರ ಸುದ್ದಿ
ಮುಧೋಳ: ತಾಲೂಕು ಪಂಚಾಯತಿಯ ಮಹಿಳಾ ಸಿಬ್ಬಂದಿ, ಪಂಚಾಯಿತಿ ಆವರಣದಲ್ಲಿ ಗಿಡಗಳಿಗೆ ನೀರೂಣಿಸುವ ಮೂಲಕ ವಿಶ್ವ ಮಹಿಳಾ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಿಸಿದರು.
ಇದೆ ಸಂದರ್ಭದಲ್ಲಿ ತಾ.ಪಂ ಮಹಿಳಾ ಸಿಬ್ಬಂದಿ ವರ್ಗ, ಬಾಗಲಕೋಟೆ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ಬಾಗಲಕೋಟೆ ವತಿಯಿಂದ ಆರ್.ಡಿ.ಪಿ.ಆರ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಹಿಳಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. ಇಂದು ಪ್ರಶಸ್ತಿಯೊಂದಿಗೆ ಖುಷಿ ಹಂಚಿಕೊಂಡರು.