ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಧರ್ಮಾಧರಿತ ಹಾಗೂ ಕಲ್ಪನೆ ಆಧರಿತ ಶಿಕ್ಷಣವನ್ನು ಕಲಿಸಲು ಮುಂದಾಗುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆರೋಪಿಸಿದ್ದಾರೆ.
ಕಸ್ತೂರಿ ರಂಗನ್ ಸಮಿತಿಯ ಬಹುತೇಕರು ಆರ್ ಎಸ್ಎಸ್ ನವರು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಮಿತಿಯಲ್ಲಿರುವ ಬಹುತೇಕರು ಆರ್ ಎಸ್ಎಸ್ ನವರು. ನೂತನ ಶಿಕ್ಷಣ ನೀತಿಯಲ್ಲಿ ಬಹುತ್ವದ ಚಿಂತನೆಗಳಿಲ್ಲ. ಎಸ್ಎಸ್ಎಲ್ ಸಿ ಪರೀಕ್ಷೆ ಕೈಬಿಡಲಾಗಿದೆ. 12ನೇ ತರಗತಿ ಪಬ್ಲಿಕ್ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದು ವಿದ್ಯಾರ್ಥಿಗಳನ್ನು ಕುಲಕಸಬುಗಳಿಗೆ ಕಳಿಸುವ ಷಡ್ಯಂತ್ರ. ಹೀಗಾಗಿ ಇದು ಮಾರಕವಾದ ಶಿಕ್ಷಣ ನೀತಿ ಕಿಡಿ ಕಾರಿದ್ದಾರೆ.