ಪ್ರಜಾಸ್ತ್ರ ಸುದ್ದಿ
ಪಂಜಾಬ್: ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಸಲ್ಲಿಸಿ ಸಾಕಷ್ಟು ಚರ್ಚೆಗೆ ಕಾರಣರಾದ ನವಜೋತ್ ಸಿಂಗ್ ಸಿಧು, ಇಂದು ಟ್ವೀಟ್ ಮಾಡಿ ಸ್ಥಾನಮಾನ ಇಲ್ಲದೆ ಇದ್ದರೂ ರಾಹುಲ್, ಪ್ರಿಯಾಂಕಾ ಪರ ನಿಲ್ಲುತ್ತೇನೆ ಎಂದಿದ್ದಾರೆ.
ಗಾಂಧೀಜಿ ಹಾಗೂ ಶಾಸ್ತ್ರೀಜಿ ತತ್ವ ಸಿದ್ಧಾಂತಗಳನ್ನು ಎತ್ತಿ ಹಿಡಿಯುತ್ತೀರಾ.. ನನಗೆ ಯಾವುದೇ ಹುದ್ದೆ ನೀಡದೆ ಇದ್ದರೂ ನಾನು ರಾಹುಲ್, ಪ್ರಿಯಾಂಕಾ ಪರ ಸದಾ ನಿಲ್ಲುತ್ತೇನೆ ಎಂದಿದ್ದಾರೆ. ಚರಣಜಿತ್ ಸಿಂಗ್ ಚಿನ್ನಿ ಸಿಎಂ ಆದ ನಂತರ ರಚಿಸಿದ ಮಂತ್ರಿ ಮಂಡಲದಿಂದ ಅಸಮಾಧಾನಗೊಂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.