ಪ್ರಜಾಸ್ತ್ರ ಸುದ್ದಿ
ವಿಜಯನಗರ: ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಅನಾವರಣಗೊಂಡಿದೆ. ಅದರ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೆರವೇರಿಸಲಿದ್ದು, ಆ ಸಮಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.
ಬಳ್ಳಾರಿ ಜಿಲ್ಲೆಯೊಂದಿಗೆ ಬೆಸೆದುಕೊಂಡಿದ್ದ ವಿಜಯನಗರ ಇಂದಿನಿಂದ ನೂತನ ಜಿಲ್ಲೆ. 6 ತಾಲೂಕುಗಳು ಕೂಡಿಕೊಂಡ ಹೊಸ ಜಿಲ್ಲೆ ಉದಯವಾಗಿದೆ. ಹಂಪಿಯ ಗತವೈಭವ ಸಾರುವ ಮಾದರಿಯಲ್ಲಿ ವೇದಿಕೆ ಸಿದ್ಧಗೊಂಡಿದ್ದು, ಸಿಎಂ ಚಾಲನೆ ನೀಡಲಿದ್ದಾರೆ. ಇದಕ್ಕೆ ಅನೇಕ ಗಣ್ಯಾತಿಗಣ್ಯರು ಸಾಕ್ಷಿಯಾಗಲಿದ್ದಾರೆ.