ಪಿಯುಸಿ ಪರೀಕ್ಷೆ ರದ್ದು.. ಎಸ್ಎಸ್ಎಲ್ ಸಿ ಇರುತ್ತೆ.. 1 ಪ್ರಶ್ನೆ ಪತ್ರಿಕೆಯಲ್ಲಿ 3 ವಿಷಯಗಳು..

264

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಬಿಎಸ್ ಸಿ ಬಳಿಕ ರಾಜ್ಯದಲ್ಲಿಯೂ ಪಿಯುಸಿ ಪರೀಕ್ಷೆಯನ್ನ ರದ್ದು ಮಾಡಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಸುರೇಶಕುಮಾರ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಈ ಬಾರಿ ಪಿಯುಸಿ ಪರೀಕ್ಷೆ ಇರುವುದಿಲ್ಲವೆಂದು ಹೇಳಿದ್ದಾರೆ.

ಪಿಯುಸಿ ಮೊದಲ ವರ್ಷದಲ್ಲಿನ ಗ್ರೇಡ್ ಮೇಲೆ ಫಲಿತಾಂಶ ನೀಡಲಾಗುತ್ತೆ. ಇನ್ನು ತುಂಬಾ ಓದಿದ್ದೇವೆ. ನಮ್ಗೆ ಗ್ರೇಡ್ ಹೆಚ್ಚಿಗೆ ಬರಬೇಕಿತ್ತು ಎಂದು ಹೇಳಿದ್ರೆ, ಅವರಿಗೆ ಕೋವಿಡ್ ಮುಗಿದ ಮೇಲೆ ಅವರಿಗೆ ಪರೀಕ್ಷೆ ತೆಗೆದುಕೊಳ್ಳಲಾಗುತ್ತೆ ಎಂದಿದ್ದಾರೆ. ಇನ್ನು ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಲಾಗುತ್ತೆ ಎಂದಿದ್ದಾರೆ.

ಜುಲೈ 3ನೇ ವಾರದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಲಾಗುತ್ತೆ. 20 ದಿನ ಮುಂಚಿತವಾಗಿ ಪರೀಕ್ಷೆ ದಿನಾಂಕ ಘೋಷಿಸಲಾಗುತ್ತೆ. 6000 ಕೇಂದ್ರಗಳಲ್ಲಿ ಪರೀಕ್ಷೆ. ಒಂದು ಕೊಠಡಿಯಲ್ಲಿ 10-12 ವಿದ್ಯಾರ್ಥಿಗಳಿಗೆ ಅವಕಾಶ. ಒಂದು ಬೆಂಚ್ ಗೆ ಒಬ್ಬ ವಿದ್ಯಾರ್ಥಿ ಇರುತ್ತಾರೆ. ಎಲ್ಲರಿಗೂ ಎನ್ 95 ಮಾಸ್ಕ್ ನೀಡುವ ಬಗ್ಗೆ ಚಿಂತನೆ ನಡೆದಿದೆ. ಇನ್ನು ಯಾರನ್ನೂ ಫೇಲ್ ಮಾಡುವುದಿಲ್ಲ. ಗ್ರೇಡ್ ಮೇಲೆ ಅವರನ್ನ ಪಾಸ್ ಮಾಡಲಾಗುತ್ತೆ ಎಂದಿದ್ದಾರೆ.

ಒಂದು ಪ್ರಶ್ನೆ ಪತ್ರಿಕೆಯಲ್ಲಿ ಮೂರು ವಿಷಯಗಳು. ಪ್ರತಿ ವಿಷಯಕ್ಕೆ 40 ಮಾರ್ಕ್ಸ್ ಇರುತ್ತೆ. ಒಟ್ಟು 120 ಮಾರ್ಕ್ಸ್ ಇರುತ್ತೆ. ಇದಕ್ಕಾಗಿ ಬಹು ಆಯ್ಕೆ ಪ್ರಶ್ನೆಗಳು ಇರುತ್ತವೆ. ಈ ಮೂಲಕ 2 ಪರೀಕ್ಷೆಗಳನ್ನ ನಡೆಸಲಾಗುತ್ತೆ. ಈ ಸಂಬಂಧ ಕೆಲವೇ ದಿನಗಳಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಲಾಗುತ್ತೆ ಎಂದಿದ್ದಾರೆ. ಇನ್ನು ಊರಿಗಳಿಗೆ ಹೋದ ವಿದ್ಯಾರ್ಥಿಗಳು ತಮ್ಮ ಸಮೀಪದ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ ಅಂತಾ ಹೇಳಿದ್ರು. ಜುಲೈ ಅಂತಿಮ ಅಥವ ಆಗಸ್ಟ್ ಮೊದಲ ವಾರದಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ ನೀಡಲಾಗುತ್ತೆ.




Leave a Reply

Your email address will not be published. Required fields are marked *

error: Content is protected !!