ಪ್ರಜಾಸ್ತ್ರ ಸುದ್ದಿ
ಯಾದಗಿರಿ: ಜಿಲ್ಲೆಯ ಸುರಪುರ ನಗರಸಭೆ ಸಿಬ್ಬಂದಿಗೆ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಲಾಗಿರುವ ಘಟನೆ ನಡೆದಿದೆ. ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಸಿಬ್ಬಂದಿಗೆ, ಆಯುಕ್ತ ಜೀವನ ಕಟ್ಟಿಮನಿ ಅವರು ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ.
ಮೂವರು ಸಿಬ್ಬಂದಿ ಆಯುಕ್ತ ಕೈಗೆ ಸಿಕ್ಕಿಬಿದ್ದು ಶಿಕ್ಷೆ ಅನುಭವಿಸಿದ್ದಾರೆ. ಇದನ್ನು ನೋಡಿದ ಉಳಿದವರು ಮಾಸ್ಕ್ ಧರಿಸಿದ್ದಾರೆ. ಈ ಬಗ್ಗೆ ಎಚ್ಚರಿಕೆ ನೀಡಿರುವ ಆಯುಕ್ತರು, ಲಾಠಿ ರುಚಿ ತೋರಿಸಬೇಕಾಗುತ್ತೆ ಎಂದಿದ್ದಾರೆ.