ಮೋದಿಯನ್ನೇ ಅರ್ಧಕ್ಕೆ ವಾಪಸ್ ಕಳಿಸಿದ ಪಂಜಾಬ್ ಪ್ರತಿಭಟನಾಕಾರರು

231

ಪ್ರಜಾಸ್ತ್ರ ಸುದ್ದಿ

ಚಂಡೀಗಢ: ಭದ್ರತಾ ವೈಫಲ್ಯದಿಂದ ಪ್ರಧಾನಿ ಮೋದಿ ಮಾಡಬೇಕಾದ ರ್ಯಾಲಿಗೆ ಹೋಗಲು ಆಗದೆ ಅರ್ಧ ದಾರಿಯಿಂದಲೇ ವಾಪಸ್ ದೆಹಲಿಗೆ ಹೋದ ಘಟನೆ ನಡೆದಿದೆ. ಫಿರೋಜ್ ಪುರದಲ್ಲಿ ವಿವಿಧ ಕಾಮಗಾರಿಗೆ ಪ್ರಧಾನಿ ಮೋದಿ ಚಾಲನೆ ನೀಡಬೇಕಿತ್ತು. ಹೀಗಾಗಿ ಬಟಿಂಡಾಕ್ಕೆ ಬಂದಿದ್ದರು.

ಬಟಿಂಡಾದಿಂದ ಫಿರೋಜ್ ಪುರಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ರೈತರು ಪ್ರಧಾನಿ ಹೋಗದಂತೆ ರಸ್ತೆಗಳನ್ನು ತೆಡೆದ ಪರಿಣಾಮ ರ್ಯಾಲಿಯಲ್ಲಿ ಭಾಗವಹಿಸಿ ಜನರನ್ನುದ್ದೇಶಿ ಮಾಡಬೇಕಿದ್ದ ಭಾಷಣ ಮಾಡಲು ಆಗಿಲ್ಲ. ಫ್ಲೈಓವರ್ ತಲುಪಿದಾಗ ಪ್ರತಿಭಟನಾಕಾರರು ರಸ್ತೆಯನ್ನು ತಡೆದಿದ್ದರು. ಹೀಗಾಗಿ ಪ್ರಧಾನಿಯೊಬ್ಬರು 15-20 ನಿಮಿಷ ಕಾಯಬೇಕಾಯಿತು.

ಇದೆ ಮೊದಲ ಬಾರಿಗೆ ಪ್ರಧಾನಿ ಮೋದಿ ಅರ್ಧ ದಾರಿಗೆ ವಾಪಸ್ ಆದ ಘಟನೆ ನಡೆದಿದೆ. ರೈತರ ವಿಚಾರದಲ್ಲಿ ಪ್ರಧಾನಿ ನಡೆದುಕೊಂಡ ರೀತಿಯಿಂದಾಗಿ ಪ್ರತಿಭಟನಾಕಾರರು ಈ ರೀತಿ ಪ್ರತ್ಯುತ್ತರ ಕೊಟ್ಟಿದ್ದಾರೆ. ಇದೀಗ ಭದ್ರತಾ ಲೋಪದ ಗಂಭೀರ ಆರೋಪ ಕೇಳಿ ಬಂದಿದ್ದು, ಗೃಹ ವ್ಯವಹಾರಗಳ ಸಚಿವಾಲಯ ರಾಜ್ಯ ಸರ್ಕಾರದಿಂದ ವರದಿಯನ್ನು ಕೇಳಿದೆ.




Leave a Reply

Your email address will not be published. Required fields are marked *

error: Content is protected !!