ನಿರ್ದೇಶಕ ವಿಜಯಪ್ರಸಾದ ಮಾಡುವ ಸಿನ್ಮಾಗಳು ಒಂದಲ್ಲ ಒಂದು ಕಾರಣಕ್ಕೆ ವಿವಾದ ಮಾಡುತ್ತವೆಯೋ.. ವಿವಾದಕ್ಕಾಗಿ ಸಿನ್ಮಾ ಮಾಡ್ತಾರೋ ಅನ್ನೋ ಪ್ರಶ್ನೆ ಸಿನಿ ಪ್ರಿಯರಲ್ಲಿ ಮೂಡಿದೆ. ನೀರ್ ದೋಸೆ ಸಿನ್ಮಾದಲ್ಲಿನ ಡೈಲಾಗ್ ಕೇಳಿದ ಜನ ಸುಸ್ತಾಗಿದ್ರು. ಇದೀಗ ಅದನ್ನು ಮೀರಿಸುವ ‘ಟಾಪ್ ಟು ಬಾಟಮ್’ ಡೈಲಾಗ್ ಪರಿಮಳ ಲಾಡ್ಜ್ ಸಿನ್ಮಾದಲ್ಲಿರುತ್ತೆ ಅನ್ನೋದಕ್ಕೆ ಟೀಸರ್ ಸಾಕ್ಷಿಯಾಗಿದೆ.
ಈಗಾಗ್ಲೇ ರಿಲೀಸ್ ಆಗಿರುವ ಪರಿಮಳ ಲಾಡ್ಜ್ ಚಿತ್ರದ ಟೀಸರ್ ನೋಡಿದ ಜನಕ್ಕೆ ಬೇಸರವಾಗಿದೆಯಂತೆ. ಕುಟುಂಬ ಸಮೇತರಾಗಿ ಕುಳಿತು ನೋಡುವ ಸಿನ್ಮಾ ಅಲ್ಲ ಅಂತಿದ್ದಾರೆ. ಈ ರೀತಿಯ ಡೈಲಾಗ್ ಗಳು ಯಾವ ಕಾರಣಕ್ಕೆ ಹೇಳಿಸಲಾಗಿದೆ ಅನ್ನೋದು ವೀಕ್ಷಕರ ಪ್ರಶ್ನೆಯಾಗಿದೆ.
ಡಬಲ್ ಮೀನಿಂಗ್ ಡೈಲಾಗ್ ಅನ್ನೋದು ಏನಿಲ್ಲ. ಎಲ್ಲವೂ ಓಪನ್ ಆಗಿ ಹೇಳಲಾಗಿದೆ. ನೀನಾಸಂ ಸತೀಶ ಮೊದಲ ಬಾರಿಗೆ ವಿಜಯಪ್ರಸಾದ ಜೊತೆ ಸಿನ್ಮಾ ಮಾಡ್ತಿದ್ದಾರೆ. ಅವರಿಗೆ ಇದು ಬೇಕಿತ್ತಾ ಅಂತಾ ಅಭಿಮಾನಿಗಳು ಕೇಳ್ತಿದ್ದಾರೆ. ನಟಿ ಸುಮನ ರಂಗನಾಥ, ನಟ ಯೋಗಿ, ನಟ ದತ್ತಣ್ಣ ಈ ಹಿಂದೆ ವಿಜಯಪ್ರಸಾದ ಜೊತೆ ಸಿನ್ಮಾ ಮಾಡಿದ್ದಾರೆ. ಬಹುಶಃ ಅವರಿಗೆ ಇದು ವಿವಾದ ಹುಟ್ಟಿಸುವ ಸಿನ್ಮಾ ಅಂತಾ ಅನಿಸಿಲ್ಲ ಅನಿಸುತ್ತೆ. ಟೀಸರ್ ನೋಡಿದ ಪಡ್ಡೆ ಹುಡ್ಗರಿಗೆ ಹಾಲು ಕುಡಿದಷ್ಟು ಖುಷಿಯಾಗಿದೆ.