ಪ್ರಜ್ವಲ್ ಪ್ರಕರಣ: ದೇವರಾಜೇಗೌಡ, ಕಾರ್ತಿಕಗೆ ನೋಟಿಸ್

69

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೆಣ್ಮಕ್ಕಳ ನಡೆಸಿದ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ, ಬಿಜೆಪಿಯ ದೇವರಾಜೇಗೌಡ ಹಾಗೂ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕಗೆ ಎಸ್ಐಟಿ ನೋಟಿಸ್ ನೀಡಿದೆ.

ಪೆನ್ ಡ್ರೈವ್ ಹಂಚಿಕೆ ಸಂಬಂಧ ಜೆಡಿಎಸ್ ನ ಪೂರ್ಣಚಂದ್ರ ತೇಜಸ್ವಿ ಏಪ್ರಿಲ್ 26ರಂದು ಹಾಸನ ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದರು. ಕಾರ್ತಿಕ್, ಪುಟ್ಟರಾಜು, ಚೇತನಗೌಡ, ನವೀನಗೌಡ, ಕ್ವಾಲಿಟಿ ಬಾರ್ ಶರತ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇನ್ನು ಪೆನ್ ಡ್ರೈವ್ ಮೊದಲು ಕೊಟ್ಟಿದ್ದು ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡರಿಗೆ ಎಂದು ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿದ್ದಾನೆ. ಈ ಸಂಬಂಧ ಇಬ್ಬರ ಕಡೆಯಿಂದ ಮಾಧ್ಯಮದಲ್ಲಿ ಆಗಾಗ ಹೇಳಿಕೆಗಳು ಬರುತ್ತಲೇ ಇವೆ. ಇವರ ಬಂಧನ ಯಾವಾಗ ಎಂದು ಕೇಳಲಾಗುತ್ತಿತ್ತು. ಈಗ ಎಸ್ಐಟಿ ನೋಟಿಸ್ ನೀಡಿದ್ದು, ನೋಟಿಸ್ ತಲುಪಿದ 24ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!