ಹುಬ್ಬಳ್ಳಿ: ಇನ್ನೆರಡು ದಿನಗಳಲ್ಲಿ ಹಸೆಮಣೆ ಏರಿ ಹೊಸ ಬದುಕಿಗೆ ಕಾಲಿಡುವ ಸಂಭ್ರಮದಲ್ಲಿದ್ದ ಪಿಎಸ್ಐ ಒಬ್ಬರು, ಆಸ್ಪತ್ರೆ ಸೇರಿದ್ದಾರೆ. ಕಾರಣ ಕರೋನಾ ಶಾಕ್. ಹೀಗಾಗಿ ನಗರದ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಬೆಂಗಳೂರಿನ ಶಂಕರಪುರಂ ಪೊಲೀಸ್ ಠಾಣೆಯ ಪಿಎಸ್ಐಯೊಬ್ಬರ ಮದುವೆ ಇನ್ನೆರಡು ದಿನಗಳಲ್ಲಿ ಅಥಣಿಯಲ್ಲಿ ನಿಶ್ಚಿಯವಾಗಿತ್ತು. ಹೀಗಾಗಿ ಸಂಭ್ರಮದಲ್ಲಿ ಎಲ್ಲೆಡೆ ಮದುವೆ ಕಾರ್ಡ್ ಹಂಚಿದ್ದಾರೆ. ಇದಕ್ಕಾಗಿ ಒಂದು ತಿಂಗಳು ರಜೆ ಸಹ ತೆಗೆದುಕೊಂಡಿದ್ರು. ಹೀಗಾಗಿ ಬೆಂಗಳೂರಿನಿಂದ ಹೊರಡುವ ಮೊದಲು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕೋವಿಡ್–19 ತಪಾಸಣೆಗೆ ಒಳಪಟ್ಟಿದ್ದರು. ಅವಳಿ ನಗರದಲ್ಲಿ ಓಡಾಡಿದ ಇವರು, ಸ್ನೇಹಿತರನ್ನು ಭೇಟಿ ಮಾಡಿ ಆಹ್ವಾನಿಸಿದ್ದರು. ಬಳಿಕ ಬೆಳಗಾವಿಗೆ ಹೊರಡಲು ಸಜ್ಜಾಗ್ತಿದ್ರು. ಅಷ್ಟರಲ್ಲಿ ಬೆಂಗಳೂರು ಆಸ್ಪತ್ರೆಯಿಂದ ಫೋನ್ ಕರೆ ಬರುತ್ತೆ. ನಿಮಗೆ ಕರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಹೇಳಿದ್ದಾರೆ. ಹೀಗಾಗಿ ಕಲ್ಯಾಣದ ಖುಷಿಯಲ್ಲಿದ್ದ ಪಿಎಸ್ಐಗೆ ಶಾಕ್ ಆಗಿದೆ.
ಮದುವೆ ಸಂಭ್ರಮದಲ್ಲಿದ್ದ ಪಿಎಸ್ಐ ವರ ಹಸೆಮಣೆ ಏರುವ ಬದಲು, ನೇರವಾಗಿ ಕಿಮ್ಸ್ ಆಸ್ಪತ್ರೆ ಸೇರಿದ್ದಾರೆ. ಇವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ ಅವಳಿ ನಗರದ ಐದು ಜನರನ್ನ ಹೋಂ ಕ್ವಾರಂಟೈನ್ನಲ್ಲಿ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ಅಲ್ದೇ, ಪಿಎಸ್ಐ ಭೇಟಿ ನೀಡಿದ್ದ ಇಲ್ಲಿನ ಉಪನಗರ ಠಾಣೆಯನ್ನ ಪಾಲಿಕೆ ಸಿಬ್ಬಂದಿ ಸ್ಯಾನಟೈಸರ್ ಸಿಂಪಡಿಸಿದೆ.