ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕೇಂದ್ರ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಕಳೆದ 15ಕ್ಕೂ ಹೆಚ್ಚು ದಿನಗಳಿಂದ ಹೋರಾಟ ಮಾಡಿಕೊಂಡು ಬರ್ತಿರುವ ರೈತರಿಗೆ ಫೇಸ್ ಬುಕ್ ಹಿನ್ನಡೆ ಮಾಡಲು ನೋಡಿತ್ತು. ಹೀಗಾಗಿ ಕಿಸಾನ್ ಏಕಾ್ತಾ ಮೋರ್ಚಾದ ಫೇಸ್ ಬುಕ್ ಖಾತೆಯನ್ನ ಬ್ಲಾಕ್ ಮಾಡಿತ್ತು.
ಸ್ವಾರಾಜ್ಯ ಭಾರತ ಪಕ್ಷದ ಮುಖಂಡ ಯೋಗೇಂದ್ರ ಯಾದವ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಶುರು ಮಾಡಲಾಗುತ್ತೆ ಅನ್ನೋ ಬರಹ ಪೋಸ್ಟ್ ಮಾಡಿದ್ದೆ ತಡ, ಖಾತೆಯನ್ನ ತೆಗೆದು ಹಾಕಲಾಗಿತ್ತು. ಇದರ ಸ್ಕ್ರೀನ್ ಶಾಟ್ ಟ್ವೀಟರ್ ಸೇರಿದಂತೆ ಇತರರ ಫೇಸ್ ಬುಕ್ ಅಕೌಂಟ್ ಮೂಲಕ ಆಕ್ರೋಶ ಹೊರ ಹಾಕಲಾಗಿತ್ತು.
ರೈತರು, ಜನರ ಆಕ್ರೋಶಕ್ಕೆ ಅಂಜಿದ ಫೇಸ್ ಬುಕ್ ಸಂಸ್ಥೆ ಇದೀಗ ಕಿಸಾನ್ ಏಕ್ತಾ ಮೋರ್ಚಾ ಖಾತೆಯನ್ನ ಕಾರ್ಯಾರಂಭ ಮಾಡುವಂತೆ ಮಾಡಿದೆ. ರೈತ ಹೋರಾಟಗಾರರನ್ನ ಹತ್ತಿಕ್ಕಿಲು ಕೇಂದ್ರ ಸರ್ಕಾರ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬಾರದು ಅನ್ನೋ ಆಕ್ರೋಶ ಎಲ್ಲಡೆಯಿಂದ ವ್ಯಕ್ತವಾಗಿದೆ.