ತಲೈವಾ ಪಾಲಿಟಿಕ್ಸ್ ಎಂಟ್ರಿ: ‘ಸಿಎಂ ಆಗುವ ಆಸೆಯಿಲ್ಲ’

318

ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ಹಿರಿಯ ನಟ ರಜನಿಕಾಂತ ರಾಜಕೀಯ ಎಂಟ್ರಿ ಬಗ್ಗೆ ಮಾತ್ನಾಡಿದ್ದಾರೆ. ಇಂದು ತಮ್ಮ ಹೊಸ ಪಕ್ಷ ಘೋಷಣೆ ಮಾಡ್ತಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ರಜನಿಕಾಂತ, 1996ರಿಂದಲೇ ನನ್ನ ಹೆಸರು ರಾಜಕೀಯದೊಂದಿಗೆ ಗುರುತಿಸಿಕೊಂಡಿತ್ತು. 2017ರಲ್ಲಿ ನಾನು ರಾಜಕೀಯ ಪ್ರವೇಶದ ಬಗ್ಗೆ ಹೇಳಿದ್ದೆ ಎಂದರು.

ತಮಿಳುನಾಡಿನಲ್ಲಿ 2 ದೊಡ್ಡ ರಾಜಕೀಯ ಪಕ್ಷಗಳಿವೆ. ಇವುಗಳಿಂದ ಸರ್ಕಾರದ ಕೆಲಸಗಳು ಸರಿಯಾಗಿ ಆಗ್ತಿಲ್ಲ. ಹೀಗಾಗಿ ಜನ ಇವರನ್ನ ತಿರಸ್ಕರಿಸಿದ್ದಾರೆ. ಇವರಲ್ಲಿ ಹೊಸ ನಾಯಕರು ಬಂದಿಲ್ಲ. ಸರಿಯಾಗಿ ಆಡಳಿತ ನಡೆಸ್ತಿಲ್ಲವೆಂದು ಹೇಳಿದ್ದಾರೆ.

ಸರ್ಕಾರಕ್ಕೆ, ಪಕ್ಷಕ್ಕೆ ಒಬ್ಬರು ನಾಯಕರು ಬೇಡ. ನನ್ಗೆ ಸಿಎಂ ಆಗುವ ಬಯಕೆ ಇಲ್ಲ. ಸಿಎಂ ಸ್ಥಾನಕ್ಕೆ ವಿದ್ಯಾವಂತರಬೇಕು. ಪಕ್ಷದ ಅಧ್ಯಕ್ಷರು ಸರ್ಕಾರವನ್ನ ನಿಯಂತ್ರಿಸಬಾರದು. ಪಕ್ಷ ಕಟ್ಟಲು ಸರಣಿ ಸಭೆ ನಡೆಸಿದ್ದೇನೆ. ಶೀಘ್ರದಲ್ಲಿಯೇ ಹೊಸ ಪಕ್ಷ ಘೋಷಣೆ ಮಾಡ್ತೀನಿ ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!