ಪ್ರಜಾಸ್ತ್ರ ಸುದ್ದಿ
ತುಮಕೂರು:
ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯ ಪ್ರಚಾರ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಪರ ಕೈ ನಾಯಕರು ಭಾರಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಆರ್ ಸಿಬಿ ಹವಾ ಸಹ ಎದ್ದಿದೆ. ಅರೆ, ಎಲೆಕ್ಷನ್ ಗೂ ಆರ್ ಸಿಬಿಗೂ ಏನ್ ಸಂಬಂಧ ಅಂತಾ ಕೇಳಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರು ಮಳೆಯಿಂದ ರಕ್ಷಣೆ ಪಡೆಯಲು ಛತ್ರಿ ಹಿಡಿಯಲಾಗಿದೆ. ಅದು ಆರ್ ಸಿಬಿ ಲೋಗೋ ಇರುವ ಛತ್ರಿಯಿದ್ದು ಭರ್ಜರಿ ವೈರಲ್ ಆಗಿದೆ. ಶಿರಾದ ದೊಡ್ಡ ಆಲದಮರದ ಬಳಿ ಪ್ರಚಾರಕ್ಕೆ ಬಂದಾಗ ಮಳೆ ಶುರುವಾಗಿದೆ. ಹೀಗಾಗಿ ಡಿಕೆಶಿ ಬೆಂಬಲಿಗರು ಹತ್ತಿರದಲ್ಲಿರುವ ಅಂಗಡಿಗೆ ಹೋಗಿ ಛತ್ರಿ ತಂದಿದ್ದಾರೆ. ಅದು ಆರ್ ಸಿಬಿ ಲೋಗೋ ಹೊಂದಿದೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಗೆಲುವಿನ ಅಲೆಯಲ್ಲಿ ತೇಲಾಡ್ತಿದೆ. ಅಭಿಮಾನಿಗಳ ಸ್ಲೋಗನ್ ಈ ಬಾರಿ ಕಪ್ ನಮ್ದೆ ಅನ್ನೋದು ಇನ್ನಷ್ಟು ಜೋರಾಗಿದೆ. ಹೀಗಾಗಿ ಇದನ್ನ ಡಿಕೆಶಿಗೆ ಹೋಲಿಕೆ ಮಾಡಿ, ಈ ಬಾರಿ ನಮ್ಮದೆ ಗೆಲವು ಎಂದು ಹೇಳಲಾಗ್ತಿದೆ. ಆರ್ ಸಿಬಿ ಅಭಿಮಾನಿಗಳಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗ್ತಿದ್ದು, ಲಕ್ಷಾಂತರ ಜನರು ಶೇರ್ ಮಾಡ್ತಿದ್ದು ಕಾಮೆಂಟ್ಸ್ ಸಹ ಮಾಡ್ತಿದ್ದಾರೆ.