ಪ್ರಜಾಸ್ತ್ರ ಸುದ್ದಿ
ಮೈಸೂರು: ತನ್ನ ಪುಟ್ಟ ಮಗ ಮೃತಪಟ್ಟಿದ್ದರೂ ಆ ದುಖಃದ ನಡುವೆ ಮತ್ತೊಬ್ಬ ರೋಗಿಯ ಜೀವ ಉಳಿಸುವ ಸಲುವಾಗಿ, ಅವರನ್ನ ಆಸ್ಪತ್ರೆಗೆ ಸೇರಿಸಿದ್ದಾರೆ ಆಂಬ್ಯುಲೆನ್ಸ್ ಚಾಲಕ ಮುಬಾರಕ್. ಇಂತಹದೊಂದು ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಸಹಾಯವಾಣಿ ಕೇಂದ್ರದ ಆಂಬ್ಯುಲೆನ್ಸ್ ಡ್ರೈವರ್ ಮುಬಾರಕ್ ಅವರ ಮಗನ ಮೈಮೇಲೆ ಬಿಸಿನೀರು ಬಿದ್ದ ಪರಿಣಾಮ ಸಾವನ್ನಪ್ಪಿದ್ದಾನೆ. ಈ ದುಖಃದಲ್ಲಿರುವಾಗ ಸಿಗ್ಮಾ ಆಸ್ಪತ್ರೆಯಿಂದ ಚಾಮರಾಜನಗರಕ್ಕೆ ರೋಗಿಯೊಬ್ಬರನ್ನ ಕರೆದುಕೊಂಡು ಹೋಗಲು ಕರೆ ಬಂದಿದೆ. ಈ ಜಾಗದಲ್ಲಿ ಬೇರೆಯಾರಾದ್ರೂ ಇದ್ರೆ ಹೋಗುತ್ತಿರ್ಲಿಲ್ಲ. ಆದ್ರೆ, ಮುಬಾರಕ್, ತನ್ನ ಪುಟ್ಟ ಕಂದನ ಮೃತದೇಹವನ್ನ ಮನೆಯಲ್ಲಿ ಬಿಟ್ಟು ರೋಗಿಯ ಸೇವೆಗೆ ಹೋಗಿದ್ದಾರೆ.
ಮಂಗಳವಾರ ತಡರಾತ್ರಿ ಇಂತಹದೊಂದು ಘಟನೆ ನಡೆದಿದೆ. ಸಿದ್ದಿಕ್ ನಗರದ ನಿವಾಸಿ ಮುಬಾರಕ್ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದು, ನಿಜಕ್ಕೂ ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ.