ಅಥಣಿ: ಡೆಡ್ಲಿ ಕರೋನಾ ವಿರುದ್ಧ ಹೋರಾಡಲು ಸಾಕಷ್ಟು ಪರಿಶ್ರಮ ವಹಿಸಲಾಗ್ತಿದೆ. ಅದೆ ರೀತಿ ಮಾಸ್ಕ್ ವಿತರಣೆ ಮಾಡುವ ಮೂಲಕ, ಜನರಿಗೆ ರಕ್ಷಣೆ ನೀಡಲಾಗ್ತಿದೆ. ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಮುದಕಣ್ಣಾ ಶೇಗುಣಸಿ ಮಾಸ್ಕ್ ವಿತರಣೆ ಮಾಡಿದ್ದಾರೆ.
ಹಲ್ಯಾಳ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಮುದಕಣ್ಣಾ ಶೇಗುಣಸಿ, ತಮ್ಮ ಸ್ವಂತ ಖರ್ಚಿನಲ್ಲಿ ತಯಾರಿಸಿದ ಮಾಸ್ಕಗಳನ್ನ ಗ್ರಾಮದ ಮನೆ ಮನೆಗೆ ತೆರಳಿ ಮಾಸ್ಕ್ ವಿತರಣೆ ಮಾಡಿದ್ದಾರೆ. ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹ ಅಧಿಕಾರಿ ರವಿ ಬಂಗಾರಪ್ಪನವರ ನೇತೃತ್ವದಲ್ಲಿ, ವಿರಕ್ತ ಮಠದ ಗುರುಸಿದ್ದ ಮಹಾಸ್ವಾಮಿಗಳಿಗೆ ಮಾಸ್ಕ ವಿತರಿಸಲಾಯಿತು.
ಈ ವೇಳೆ ಮಹಾದೇವ ಬಿಸಲನಾಯಿಕ, ಚಂದ್ರಕಾಂತ ಕಾಗವಾಡ, ಬಬಲು ಅಂಬಿ, ಮಲ್ಲಯ್ಯಾ ಮಠದ, ವಿಠ್ಠಲ ಮಲಾಬದಿ, ಮುದಕಣ್ಣಾ ಬಿರಾದಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.