ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ತೆನೆ ಹೊತ್ತು ಮಹಿಳೆಯಿಂದ ದೂರವಾಗಿ ಕಮಲ ಹಿಡಿದುಕೊಂಡ ಬಸವರಾಜ್ ಹೊರಟ್ಟಿಗೆ ಬಿಜೆಪಿ ಕೈ ಕೊಟ್ಟಿದೆ. ಈ ಬಗ್ಗೆ ಸ್ವತಃ ಅವರೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಸಭಾಪತಿ ಸ್ಥಾನ ನೀಡುವುದಾಗಿ ಮೊದಲು ಒಪ್ಪಿಕೊಂಡಿದ್ದ ಬಿಜೆಪಿ, ಈಗ ಹಿಂದೇಟು ಹಾಕುತ್ತಿದೆಯಂತೆ.
ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಲು ಸೆಪ್ಟೆಂಬರ್ 21ರಂದು ಚುನಾವಣೆ ನಡೆಸಲು ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸಿತ್ತು. ಆದರೆ, ಈ ಮಧ್ಯ ಬಿಜೆಪಿ ನಾಯಕರು ನಡೆಸಿದ ಸಭೆಯಲ್ಲಿ, ಪಕ್ಷಕ್ಕೆ ಈಗ ಬಂದಿರುವ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡುವುದು ಬೇಡ. ಪಕ್ಷದ ನಿಷ್ಠಾವಂತರನ್ನು ಪರಿಗಣಿಸಬೇಕು ಎಂದಿದ್ದಾರೆ. ಹೀಗಾಗಿ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವದರಿಂದ ಸರ್ಕಾರ ಹಿಂದೆ ಸರಿದಿದೆಯಂತೆ.
ಅಂದು ಬಿಜೆಪಿ ಸೇರುವ ಸಂದರ್ಭದಲ್ಲಿ ನೀಡಿದ ಮಾತಿನಂತೆ ನಡೆದುಕೊಂಡಿಲ್ಲ. ಸಿಎಂ ಬೊಮ್ಮಾಯಿ ಜೊತೆ ಚರ್ಚೆ ಮಾಡಿದರೂ ಸ್ಪಷ್ಟತೆ ನೀಡಿಲ್ಲ. ಇದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಅಸಮಾಧಾನಕ್ಕೆ ಕಾರಣವಾಗಿದೆ.