ನವದೆಹಲಿ: ಪೇಜಾವರ ಶ್ರೀಗಳ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಟ್ವೀಟರ್ ಮೂಲಕ ಶ್ರೀಗಳನ್ನ ನೆನಪಿಸಿಕೊಂಡಿರುವ ಮೋದಿ, ನಿಮ್ಮ ಸೇವೆ, ಆಧ್ಯಾತ್ಮಿಕತೆ ಸಮಾಜಕ್ಕೆ ಮಾದರಿಯಾಗಿದೆ ಅಂತಾ ಹೇಳಿದ್ದಾರೆ. ಅಲ್ದೇ ಲಕ್ಷಾಂತರ ಜನರ ಹೃದಯಗಳಲ್ಲಿ ನೀವು ಶಾಶ್ವತವಾಗಿ ಉಳಿಯಲಿದ್ದೀರಿ ಎಂದಿದ್ದಾರೆ.
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಸುರೇಶ ಅಂಗಡಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ವಾಮನಮೂರ್ತಿ ತ್ರಿವಿಕ್ರ ಕೀರ್ತಿ ಎಂದು ಹೇಳಿರುವ ನಾಯಕರು, ಅವರಿಗೆ ಅಂತಿಮ ನಮನವನ್ನ ಸಲ್ಲಿಸಿದ್ದಾರೆ.