ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಸೇರಿದಂತೆ ಡಿಪ್ಲೋಮಾ, ಫಾರ್ಮಸಿ, ಎಂಜಿನಿಯರಿಂಗ್ ಪರೀಕ್ಷೆ ನಡೆಸದಂತೆ ಒತ್ತಾಯಿಸಿ, ಸಾಮಾಜಿಕ ಹೋರಾಟಗಾರ ವಾಟಳ್ ನಾಗರಾಜ ಪ್ರತಿಭಟನೆ ನಡೆಸಿದ್ರು. ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದ ಅವರನ್ನ ಪೊಲೀಸ್ರು ವಶಕ್ಕೆ ಪಡೆದ್ರು.
ಈ ವೇಳೆ ಮಾತ್ನಾಡಿದ ವಾಟಳ್ ನಾಗರಾಜ, ಆಂಧ್ರ, ತೆಲಂಗಾಣ ಸೇರಿ ಹಲವು ರಾಜ್ಯಗಳಲ್ಲಿ 10ನೇ ತರಗತಿ ಪರೀಕ್ಷೆಗಳನ್ನ ರದ್ದು ಮಾಡಲಾಗಿದೆ. ಅದರಂತೆ ರಾಜ್ಯದಲ್ಲಿ ರದ್ದು ಮಾಡಿ ಎಲ್ಲರನ್ನೂ ಪಾಸ್ ಮಾಡಬೇಕೆಂದು ಒತ್ತಾಯಿಸಿದ್ರು.
ವಿದ್ಯಾರ್ಥಿಗಳಿಗೆ ಸೋಂಕು ತಗುಲಿದ್ರೆ ಕುಟುಂಬಸ್ಥರು ಪರಿತಪಿಸಬೇಕಾಗುತ್ತೆ. ಹೀಗಾಗಿ ಕರೋನಾ ಸೋಂಕು ನಿಯಂತ್ರಣಕ್ಕೆ ಬರುವ ತನಕ ಪರೀಕ್ಷೆ ನಡೆಸಬಾರದು. ಶಾಲೆಗಳನ್ನ ಪ್ರಾರಂಭಿಸಬಾರದು ಎಂದು ಹೇಳಿದ್ರು.