ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಹೈದ್ರಾಬಾದ್: ತೆಲುಗು ಕಿರುತರೆ ನಟಿ ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಿರ್ಮಾಪಕ ಪೊಲೀಸರ ಮುಂದೆ ಶರಣಾಗಿದ್ದಾರೆ. ನಿರ್ಮಾಪಕ ಅಶೋಕ ರೆಡ್ಡಿ ಪೊಲೀಸರ ಎದುರು ಶರಣಾಗಿದ್ದಾನೆ.
ಸೆಪ್ಟೆಂಬರ್ 8ರಂದು ನಟಿ ಶ್ರಾವಣಿ ಮಧುರಾ ನಗರದಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸಾಯಿಕೃಷ್ಣಾ ರೆಡ್ಡಿ, ದೇವರಾಜ ರೆಡ್ಡಿ, ಅಶೋಕ ರೆಡ್ಡಿ ಎಂಬುವರ ಕಿರುಕುಳದಿಂದ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗ್ತಿದೆ.