ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ನಂತರ ಇದೀಗ ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. ಡಿ.ರೂಪಾ ಸೇರಿದಂತೆ 17 ಜನ ಹಿರಿಯ ಪೊಲೀಸ್ ಅಧಿಕಾರಿಗಳನ್ನ ವರ್ಗಾವಾಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ ರಾವ್ ವರ್ಗಾವಣೆ ಬಳಿಕ, ಖಾಸಗಿ ಆಸ್ಪತ್ರೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಡಿ. ರೂಪಾ ತಮ್ಗೆ ಜವಾಬ್ದಾರಿ ನೀಡಿದ್ರೆ ಎಲ್ಲವನ್ನ ಸರಿ ಮಾಡುತ್ತೇವೆ ಎಂದಿರುವ ಹೊತ್ತಿನಲ್ಲಿಯೇ ಅವರನ್ನೂ ಸೇರಿದಂತೆ 17 ಜನರ ವರ್ಗಾವಣೆಯಾಗಿದೆ.
ವರ್ಗಾವಣೆ ಹಾಗೂ ಹುದ್ದೆ
ಉಮೇಶಕುಮಾರ, ಎಡಿಜಿಪಿ ಸಿಐಡಿ, ಬೆಂಗಳೂರು, ಡಿ.ರೂಪಾ, ಐಜಿಪಿ, ಗೃಹ ಇಲಾಖೆ, ಎನ್.ಶಶಿಕುಮಾರ, ಎಸ್ಪಿ ವೈರ್ ಲೆಸ್, ಬೆಂಗಳೂರು, ಡಾ.ರೋಹಿಣಿ ಕಟೋಚ್ ಸಪೆಟ್, ಎಸ್ಪಿ ಸಿಐಡಿ, ಬೆಂಗಳೂರು, ಎಂ.ಎನ್ ಅನುಚೇತ, ಡಿಸಿಪಿ ಕೇಂದ್ರ ವಿಭಾಗ, ಬೆಂಗಳೂರು, ಬಿ.ರಮೇಶ, ಎಸ್ಪಿ ಸಿಐಡಿ, ಬೆಂಗಳೂರು, ಇಯಾದ್ ಮಾರ್ಟಿನ್, ಎಸ್ಪಿ ಆ್ಯಂಟಿ ನಕ್ಸಲ್ ಪೋರ್ಸ್ ಕಾರ್ಕಳ, ಉಡುಪಿ..
ಪ್ರಕಾಶ ನಿಕ್ಕಂ, ಎಸ್ಪಿ, ರಾಯಚೂರ, ಇಳಕ್ಕಿಯ ಕರುಣಾಗರನ್, ಎಸ್ಪಿ ಕೆಜಿಎಫ್, ಕೋಲಾರ, ಧರ್ಮೇಂದ್ರಕುಮಾರ ಮೀನ್, ಡಿಸಿಪಿ ಉತ್ತರ ವಿಭಾಗ, ಬೆಂಗಳೂರು ನಗರ, ಡಾ.ಸುಮನ್ ಡಿ ಪನ್ನೇಕರ್, ಡೆಪ್ಯೂಟ್ ಡೈರೆಕ್ಟರ್, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು, ಹರೀಶ ಪಾಂಡೆ, ಡಿಸಿಪಿ, ದಕ್ಷಿಣ ವಿಭಾಗ, ಬೆಂಗಳೂರು ನಗರ, ಮೊಹಮ್ಮದ ಸುಜೀತ, ಡಿಸಿಪಿ, ಸಿಟಿ ಆರ್ಮ್ಡ್ ರಿಸರ್ವ್, ಹೆಡ್ ಕ್ವಾಟರ್ಸ್ ಬೆಂಗಳೂರು, ಡಾ.ಸಿಮಿ ಮರಿಯಮ್ ಜಾರ್ಜ್, ಎಸ್ಪಿ ಕಲಬುರಗಿ, ಡಾ.ಸಿ.ಬಿ ವೇದಮೂರ್ತಿ, ಎಸ್ಪಿ ಗುಪ್ತಚರ ಇಲಾಖೆ, ಬೆಂಗಳೂರು, ಡಿ.ದೇವರಾಜ, ಡಿಸಿಪಿ ವೈಟ್ ಫೀಲ್ಡ್ ಬೆಂಗಳೂರು ಹಾಗೂ ಸಂಜೀವ ಎಂ ಪಾಟೀಲ, ಡಿಸಿಪಿ ಪಶ್ಚಿಮ ವಿಭಾಗ ಬೆಂಗಳೂರು.. ಹೀಗೆ 17 ಜನರನ್ನ ವರ್ಗಾವಣೆ ಮಾಡಲಾಗಿದೆ.