ಪ್ರಜಾಸ್ತ್ರ ಅಪರಾಧ ಸುದ್ದಿ
ಆಂಧ್ರಪ್ರದೇಶ: ಪತ್ನಿಗಾಗಿ ತಾಯಿ, ತಂಗಿ ಹಾಗೂ ತಮ್ಮನನ್ನ ಹತ್ಯೆ ಮಾಡಿರುವ ಭೀಕರ ಘಟನೆ ಆಂಧ್ರದ ಮದನಪಲ್ಲಿಯಲ್ಲಿ ನಡೆದಿದೆ. ಕರಿಮುಲ್ಲಾ ಅನ್ನೋ ವ್ಯಕ್ತಿ ತಾಯಿ ಗುಲ್ಜರ್ ಬೇಗಂ, ತಂಗಿ ಕರಿಮುನ್ನಿಸಾ, ತಮ್ಮ ಮೊಹಮ್ಮದ ರಫಿಯನ್ನ ಹತ್ಯೆ ಮಾಡಿದ್ದಾನೆ.
ಕರಿಮುಲ್ಲಾ ಪತ್ನಿ ಜೊತೆ ಸದಾ ಜಗಳವಾಡುತ್ತಿದ್ದ. ಇದರಿಂದ ಬೇಸತ್ತು ಆಕೆ ತವರು ಮನೆಗೆ ಹೋಗಿದ್ದಾಳೆ. ಆಕೆಯನ್ನ ಕರೆದುಕೊಂಡು ಬರುವಂತೆ ಕರಿಮುಲ್ಲಾ ಪದೆಪದೆ ಮನೆಯಲ್ಲಿ ಜಗಳವಾಡುತ್ತಿದ್ದನಂತೆ. ಇವನ ಗುಣ ಗೊತ್ತಿದ್ದ ಕುಟುಂಬಸ್ಥರು ಸ್ಪಂದಿಸಿಲ್ಲ. ಇದ್ರಿಂದ ಕೋಪಗೊಂಡ ಕರಿಮುಲ್ಲಾ ಮಲಗಿದ್ದಾಗ ಭಾನುವಾರ ರಾತ್ರಿ ಮೂವರನ್ನ ಹತ್ಯೆ ಮಾಡಿ, ಪೊಲೀಸರಿಗೆ ಶರಣಾಗಿದ್ದಾನೆ.
ಕೆಲ ದಿನಗಳಿಂದ ಹೆತ್ತವರೆ ಪುನರ್ಜನ್ಮ ಪ್ರಾಪ್ತಿಯಾಗುತ್ತೆ ಎಂದು ಹೆಣ್ಮಕ್ಕಳಿಬ್ಬರನ್ನ ಭೀಕರವಾಗಿ ಹತ್ಯೆ ಮಾಡಿದ್ದ ಘಟನೆ, ಇದೆ ಮದನಪಲ್ಲಿಯ ಶಿವನಗರದಲ್ಲಿ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಇದೀಗ ತ್ರಿಬಲ್ ಮರ್ಡರ್ ನಡೆದಿದೆ.