ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಲಸಿಕೆ ಅಭಿಯಾನ ಕಂಪ್ಲೀಟ್ ವಿಫಲವಾಗ್ತಿದೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನ ಭರ್ಜರಿ ಕ್ಲಾಸ್ ತೆಗೆದುಕೊಂಡಿದೆ. ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆಗಳನ್ನ ಕೇಳಿರುವ ಹೈಕೋರ್ಟ್, ವ್ಯಾಕ್ಸಿನ್ ಪಡೆಯುವುದು ಜನರ ಹಕ್ಕು. ಅದನ್ನು ನೀಡಲು ಆಗುವುದಿಲ್ಲವೆಂದರೆ ಹೇಳಿ. ಅದನ್ನೇ ದಾಖಲಿಸುತ್ತೇವೆ ಎಂದಿದೆ. ಇನ್ನು ಜನರಿಗೆ ಸತ್ಯ ಹೇಳಿ. ನಿಮ್ಮ ಬಳಿ ವ್ಯಾಕ್ಸಿನ್ ಎಷ್ಟು ಇದೆ ಅನ್ನೋದು ತಿಳಿಸಿ. ಜನರಿಗೆ ಲಸಿಕೆ ಹಾಕಿಸಿಕೊಳ್ಳಿ ಎನ್ನುತ್ತೀರಿ. ಜನರು ಬಂದ್ರೆ ಲಸಿಕೆ ಇಲ್ಲವೆಂದು ಹೇಳ್ತೀರಿ ಎಂದು ಭರ್ಜರಿ ಕ್ಲಾಸ್ ತೆಗೆದುಕೊಂಡಿದೆ.
26 ಲಕ್ಷ ಜನರಿಗೆ ವ್ಯಾಕ್ಸಿಜನ್ ಕೊರತೆ ಇದೆ. ಈಗ ಏನು ಮಾಡ್ತಿದ್ದಾರೆ. ಮೊದಲ ಡೋಸ್ ಪಡೆದವರು 2ನೇ ಡೋಸ್ ಪಡೆಯಲು ಆಗ್ತಿಲ್ಲ. 6 ಕೋಟಿಗೂ ಹೆಚ್ಚಿರುವ ರಾಜ್ಯದಲ್ಲಿ ಎಷ್ಟು ಜನರಿಗೆ ವ್ಯಾಕ್ಸಿನ್ ಕೊಟ್ಟಿದ್ದೀರಿ ಎಂದು ಕೇಳಿದೆ. ಅಲ್ದೇ, ಇದೆಂಥಾ ವ್ಯಾಕ್ಸಿನ್ ಅಭಿಯಾನ ಎಂದು ಚಾಟಿ ಬೀಸಿದೆ.
ಇನ್ನು 18-45 ವರ್ಷದ ಒಳಗಿನವರಿಗೆ ಸಧ್ಯಕ್ಕೆ ಲಸಿಕೆ ಇಲ್ಲವೆಂದು ಹೇಳಿದೆ. ಇದಕ್ಕೂ ಮೊದ್ಲು ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಮಾಡಿಸಿಕೊಳ್ಳಿ. ಮೇ 1ರಿಂದ ಲಸಿಕೆ ಹಾಕಿಸಿಕೊಳ್ಳಿ ಎಂದಿದ್ರು. 12 ದಿನಗಳು ಕಳೆದ್ರೂ ವ್ಯಾಕ್ಸಿನ್ ನೀಡ್ತಿಲ್ಲ. ಹೀಗಾಗಿ ಹೈಕೋರ್ಟ್ ಭರ್ಜರಿ ಕ್ಲಾಸ್ ತೆಗೆದುಕೊಂಡಿದೆ.