ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪಶು ವೈದ್ಯಾಧಿಕಾರಿ ಕಚೇರಿಯಲ್ಲಿ ಭರ್ಜರಿಯಾಗಿ ನಿದ್ದೆಗೆ ಜಾರಿರುವುದು ಕಂಡು ಬಂದಿದೆ. ತಮ್ಮ ಹುದ್ದೆಗೆ ಇರುವ ಜವಾಬ್ದಾರಿ ಮತ್ತು ಗೌರವ ಮರೆತು ಬಿಂದಾಸ್ ಆಗಿ ಟೇಬಲ್ ಮೇಲೆ ಕಾಲು ಚಾಚು ಮಲಗಿದ್ದಾರೆ.
ಎಲ್ಲೆಡೆ ಕರೋನಾ ಭೀತಿಯಿಂದ ಜನರು ಒದ್ದಾಡ್ತಿದ್ದಾರೆ. ಕೆಲ ಅಧಿಕಾರಿಗಳು ಸತತವಾಗಿ ಕರ್ತವ್ಯ ನಿರ್ವಹಿಸ್ತಿದ್ರೆ, ಇಂಥಾ ಅಧಿಕಾರಿಗಳು ಆಫೀಸ್ ನಲ್ಲೇ ನಿದ್ದೆಗೆ ಹೊಡೆಯುತ್ತಾರೆ. ಮುದ್ದೇಬಿಹಾಳ ತಾಲೂಕಾ ಪಶು ವೈದ್ಯಾಧಿಕಾರಿ ಎ.ಎಸ್. ಚೌಧರಿ ಗಾಢನಿದ್ರೆಗೆ ಜಾರಿರುವುದನ್ನ ಕೆಲವರು ಫೋಟೋ ತೆಗೆದಿದ್ದಾರೆ.
ತಿಂಗಳ ಲಕ್ಷ ಲಕ್ಷ ಸಂಬಳ ಪಡೆಯುವ ಇಂಥಾ ಅಧಿಕಾರಿಗಳು, ಕಚೇರಿಯಲ್ಲಿಯೇ ಹೀಗೆ ಮಲಗಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಪಶು ವೈದ್ಯಾಧಿಕಾರಿ ಎ.ಎಸ್ ಚೌಧರಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.