ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆಯ ಜೊತೆಯಲ್ಲಿ ಮುಂದಿನ ಚುನಾವಣೆಯ ಸಂಬಂಧವೂ ಬಿಜೆಪಿ ಭರ್ಜರಿ ಪ್ಲಾನ್ ನಡೆಸಿದೆ. ಹೀಗಾಗಿ ನೂತನ ಸಿಎಂ ಜೊತೆಗೆ ನಾಲ್ವರನ್ನ ಉಪಮುಖ್ಯಮಂತ್ರಿ ಮಾಡುವ ಪ್ಲಾನ್ ನಡೆಸಿದೆಯಂತೆ.
ಲಿಂಗಾಯತ ಸಮುದಾಯದ ಸಿಎಂ, ಒಕ್ಕಲಿಗ ಸಮುದಾಯದ ಒಬ್ಬರು ಡಿಸಿಎಂ, ಎಸ್ ಸಿ, ಎಸ್ ಟಿ ಸಮುದಾಯದ ಒಬ್ಬರು ಡಿಸಿಎಂ ಹಾಗೂ ಒಬಿಸಿ ಸಮುದಾಯದ ಒಬ್ಬರು ಡಿಸಿಎಂ ಮಾಡುವ ಪ್ಲಾನ್ ನಡೆಸಿದೆಯಂತೆ. ಇದರ ಜೊತೆಗೆ ಒಕ್ಕಲಿಗ ಸಮುದಾಯದ ಮತ್ತೊಬ್ಬ ನಾಯಕನಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಮುಂದಾಗಿದ್ದು, ಮುಂದಿನ ಎರಡು ವರ್ಷದ ಜೊತೆಗೆ ಚುನಾವಣೆಗೂ ಈಗ್ಲಿಂದಲೇ ತಯಾರಿ ನಡೆಸಲಾಗ್ತಿದೆ ಅಂತಾ ಹೇಳಲಾಗ್ತಿದೆ.