ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಗಬಸಾವಳಗಿ ಗ್ರಾಮದಲ್ಲಿ ಅಳವಡಿಸಿರುವ ವಿದ್ಯುತ್ ಟಿಸಿಯಿಂದ ಬಾಲಕನೊಬ್ಬನಿಗೆ ಶಾಕ್ ಹೊಡೆದು ಮೃತಪಟ್ಟಿರುವ ಘಟನೆ ನಡೆದಿದೆ. ಪವನ ದಾಮು ಚೌವ್ಹಾಣ(6) ಅನ್ನೋ ಬಾಲಕ ಶುಕ್ರವಾರ ರಾತ್ರಿ ವಿಜಯಪುರದ ಬಿಎಲ್ ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನ ಹೊಂದಿದ್ದಾನೆ.
ಜುಲೈ 21ರಂದು ಬಾಲಕ ಪವನ ಆಟವಾಡುತ್ತಾ ಗ್ರಾಮ ಪಂಚಾಯ್ತಿ ಕಚೇರಿ ಹತ್ತಿರವಿರುವ ವಿದ್ಯುತ್ ಟಿಸಿ ಕಡೆ ಹೋಗಿದ್ದಾನೆ. ಹೀಗೆ ಹೋದ ಬಾಲಕನಿಗೆ ಶಾಕ್ ಹೊಡೆದಿದೆ. ಇದ್ರಿಂದಾಗಿ ಕೈ, ಹೊಟ್ಟೆ ಭಾಗ ಸೇರಿದಂತೆ ಇತರೆ ಕಡೆ ಗಂಭೀರ ಪ್ರಮಾಣದ ಗಾಯಗಳಾಗಿದ್ವು. ಹೀಗಾಗಿ ವಿಜಯಪುರದ ಬಿಎಲ್ ಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ಬಾಲಕ ಜುಲೈ 23ರ ರಾತ್ರಿ ಸಾವನ್ನಪ್ಪಿದ್ದಾನೆ. ಕುಟುಂಬಸ್ಥರ ಆಕ್ರಂದನ ಹೇಳತೀರದಾಗಿದೆ.
ವಿದ್ಯುತ್ ಟಿಸಿಗೆ ಕೆಇಬಿ ಅವರು ಯಾವುದೇ ರೀತಿಯ ಸುರಕ್ಷಿತ ಬೇಲಿ ಹಾಕಿಲ್ಲ. ಇದ್ರಿಂದಾಗಿ ಏನೂ ಅರಿಯದ ಬಾಲಕನ ಜೀವ ಹೋಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.