ಬಿಎಸ್ವೈ ಪರ ಸ್ವಾಮೀಜಿಗಳ ಶಕ್ತಿಪ್ರದರ್ಶನ: ಹೈಕಮಾಂಡ್ ಕೆಂಡಾಮಂಡಲ!

297

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್ ಯಡಿಯೂರಪ್ಪನವರನ್ನ ಕೆಳಗೆ ಇಳಿಸಬಾರದು. ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಹೇಳಿ ಲಿಂಗಾಯತ ಸ್ವಾಮೀಜಿಗಳು ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ಅಲ್ದೇ, ಅವರನ್ನ ಕೆಳಗಿಳಿಸಿದ್ರೆ ಬಿಜೆಪಿ ಉಳಿಗಾಲವಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಕೆಂಡಾಮಂಡಲವಾಗಿದೆಯಂತೆ.

ಸ್ವಾಮೀಜಿಗಳನ್ನು ಮುಂದೆ ಬಿಟ್ಟು ಶಕ್ತಿಪ್ರದರ್ಶನ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದು, ಸಿಎಂ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಬಿಜೆಪಿ ವರಿಷ್ಠರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಹೈಕಮಾಂಡ್ ಸಮಾಧಾನಪಡಿಸಲು ವಿಜಯೇಂದ್ರ ತೆರಳಿದ್ದಾರೆ.

ಶುಕ್ರವಾರ ತಡರಾತ್ರಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಭೇಟಿ ಮಾಡಿ ಮನವರಿಕೆಗೆ ವಿಜಯೇಂದ್ರ ಯತ್ನಿಸಿದ್ದಾರೆ. ಶ್ರೀಗಳು ಬೀದಿಗಿಳಿದಿದ್ದರ ಹಿಂದೆ ನಮ್ಮ ಮತ್ತು ನಮ್ಮ ಬೆಂಬಲಿಗರ ಕೈವಾಡ ಇಲ್ಲ ಎಂದು ಮನವರಿಕೆ ಪ್ರಯತ್ನಮಾಡಿದ್ದಾರೆ ಎಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!