ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ಬಸವ ಮಂಟಪದಲ್ಲಿಿ ವಿಶ್ವ ಪತ್ರಿಕಾ ವಿತರಕರ ದಿನವನ್ನು ಶನಿವಾರ ಸಂಜೆ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಎಂತಹದೇ ಸಂದರ್ಭ ಇದ್ದರೂ ವರ್ಷದ 365 ದಿನ ಮನೆ ಮನೆಗೆ ಪತ್ರಿಕಾ ವಿತರಣೆ ಮಾಡುವುದು ನಿಜಕ್ಕೂ ಕಷ್ಟದ ಕೆಲಸ. ಅದನ್ನು ಮಾಡುತ್ತಿರುವ ಪತ್ರಿಕಾ ವಿತರಕರಿಗೆ ಧನ್ಯವಾದಗಳು ಎಂದರು.
ಇದೇ ವೇಳೆ ಪತ್ರಿಕಾ ವಿತರಕರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾನಿಪ ಅಧ್ಯಕ್ಷ ಆನಂದ ಶಹಬಾದಿ, ವರದಿಗಾರರಾದ ಸಿದ್ಧಲಿಂಗ ಕಿಣಗಿ, ರಮೇಶ ಪೂಜಾರ, ರವಿಚಂದ್ರ ಮಲ್ಲೇದ, ಎಂ.ಎ ಖತೀಬ ಹಾಗೂ ಪುರಸಭೆ ಸದಸ್ಯರು ಸೇರಿ ಹಲವರು ಭಾಗವಹಿಸಿದ್ದರು.