ಭೀಮಾಶಂಕರ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

737

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷದ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆಯ ಆಚರಣೆ ಮಾಡಲಾಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಕುದರಗೊಂಡ ಶಿವಾನಂದ ಮಠದ ಸಿದ್ರಾಮೇಶ್ವರ ಮಹಾಸ್ವಾಮಿಗಳು, ವಿಶ್ವ ಹಿಂದೂ ಪರಿಷದ್ ಸಂಘಟನೆಯ ಒಗ್ಗಟ್ಟಿನ ಬಗ್ಗೆ ಮಾತನಾಡಿದರು. ಆರ್ ಡಿ ಪಾಟೀಲ ಕಾಲೇಜಿನ ಪ್ರಾಂಶುಪಾಲರಾದ ಸನ್ನಳ್ಳಿಯವರು ಶ್ರೀಕೃಷ್ಣನು ಧರ್ಮ ರಕ್ಷಣೆಗಾಗಿ ಹೋರಾಡಿದ ಪರಿಯನ್ನು ವಿವರಿಸಿದರು. ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯಕ, ಪರಿಷದ್ ನ ಸ್ಥಾಪನಾ ದಿನದ ಹಾಗೂ ಸಂಘಟನೆಯ ವಿಸ್ತರಣೆಯ ಕುರಿತು ಮಾತನಾಡಿದರು. ಸಿಂದಗಿ ತಾಲೂಕ ವಿಎಚ್ ಪಿ ಅಧ್ಯಕ್ಷ ಡಾ.ಶರಣಗೌಡ ಬಿರಾದಾರ ಹಿಂದೂ ಸಂಘಟನೆಯಲ್ಲಿ ಯುವಕರ ಪಾತ್ರವನ್ನು ಕುರಿತು ಮಾತನಾಡಿದರು.

ವಿಎಚ್ ಪಿ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಹರನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ಸಂಗ ಪ್ರಮುಖರಾದ ಬಸವರಾಜ ಬಿರಾದಾರ ನಿರೂಪಿಸಿದರು. ಈ ಸಂಧರ್ಭದಲ್ಲಿ ವಿ.ಎಚ್.ಪಿ ಸಹಕಾರ್ಯದರ್ಶಿ ಸಾಹೇಬಗೌಡ ಅಡವಿ, ಮೌನೇಶ್ ವಿಶ್ವಕರ್ಮ, ಬಜರಂಗದಳ ತಾಲೂಕ ಸಂಯೋಜಕ ಯಮನಪ್ಪ ಚೌಧರಿ, ಸಹ ಸಂಯೋಜಕ ರಮೇಶ ಬ್ಯಾಕೋಡ, ಗೋರಕ್ಷಾ ಪ್ರಮುಖ ಗೊಲ್ಲಾಳಯ್ಯ ಹಿರೇಮಠ, ದುರ್ಗಾವಾಹಿನಿ ಪ್ರಮುಖ ಬೌರಮ್ಮ ಕರ್ಪುರಮಠ, ಪ್ರಶಾಂತ ಬಗಲಿ, ಸಿದ್ದನಗೌಡ ಅಂಬಳೂರ, ಅಕ್ಷಯ ಕುಲಕರ್ಣಿ, ದೇಸಾಯಿ ಗುರುಗಳು, ಅಕ್ಷಯ ಬಂದಾಳ, ನೀಲಮ್ಮ ಹಡಪದ, ಮಹಾದೇವಿ ಹಡಪದ, ಬೌರಮ್ಮ ಬಗಲಿ, ತನುಜಾ ತಾತೋಡಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು




Leave a Reply

Your email address will not be published. Required fields are marked *

error: Content is protected !!