ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಯಡಿಯೂರಪ್ಪನವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿ ಆ ಜಾಗಕ್ಕೆ ಮತ್ತೊಬ್ಬರನ್ನ ಆಯ್ಕೆ ಮಾಡಲಾಗುತ್ತೆ ಅನ್ನೋದು ಚರ್ಚೆಯಲ್ಲಿರುವ ವಿಚಾರ. ಇದರ ಜೊತೆಗೆ ಲಿಂಗಾಯತ ಸ್ವಾಮೀಜಿಗಳು ಸಿಎಂ ಪರ ನಿಂತು ಅವರಿಗೆ ಬೆಂಬಲ ಸೂಚಿಸಿದ್ರು. ಈ ಬಗ್ಗೆ ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ಯಡಿಯೂರಪ್ಪ ಸ್ವಾಮೀಜಿಗಳಿಗೆ ನೀಡಿದ ಲಕೋಟೆ ಭರ್ಜರಿ ಸದ್ದು ಮಾಡಿದೆ.
ಈ ಲಕೋಟೆ ವಿಚಾರ ಸಾಕಷ್ಟು ಚರ್ಚೆ ನಡೆಸಿದೆ. ಚೆಕ್ ಇರಬಹುದಾ, ದುಡ್ಡು ಇರಬಹುದಾ, ಏನು ಇರಬಹುದು ಅನ್ನೋ ಚರ್ಚೆ ಮಾಧ್ಯಮಗಳಲ್ಲಿ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿಯೂ ನಡೆದಿದೆ. ಈ ಬಗ್ಗೆ ಮಾತ್ನಾಡಿರುವ ದಿಂಗಾಲೇಶ್ವರ ಸ್ವಾಮೀಜಿ, ಕಾಣಿಕೆ ಕೊಡುವುದು ಸಂಸ್ಕಾರ. ಪಡೆಯುವುದು ಧರ್ಮ. ಜನರಿಗಾಗಿ ಕಾಣಿಕೆ ತೆಗೆದುಕೊಳ್ಳುತ್ತೇವೆ. ಇದಕ್ಕೆ ವಿರೋಧಿಸುವವರು ಸಂಸ್ಕಾರ ಇಲ್ಲದವರು. ಲಕೋಟೆಯಲ್ಲಿ ಏನಿತ್ತು ಅನ್ನೋದು ಗೊತ್ತಿಲ್ಲ. ನಾವು ಯಾರಿಗೂ ಮಾರಾಟವಾಗಿಲ್ಲವೆಂದು ಹೇಳಿದ್ದಾರೆ. ಒಟ್ಟಿನಲ್ಲಿ ಲಕೋಟೆ ರಹಸ್ಯವೇನು ಅನ್ನೋದು ಪ್ರಶ್ನೆಯಾಗಿ ಉಳಿದಿದೆ.