ಸಿಎಂ ಕೊಟ್ಟ ಲಕೋಟೆ ಚರ್ಚೆ: ಕಾಣಿಕೆ ಕೊಡುವುದು ಸಂಸ್ಕಾರವೆಂದ ಸ್ವಾಮೀಜಿ

232

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಯಡಿಯೂರಪ್ಪನವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿ ಆ ಜಾಗಕ್ಕೆ ಮತ್ತೊಬ್ಬರನ್ನ ಆಯ್ಕೆ ಮಾಡಲಾಗುತ್ತೆ ಅನ್ನೋದು ಚರ್ಚೆಯಲ್ಲಿರುವ ವಿಚಾರ. ಇದರ ಜೊತೆಗೆ ಲಿಂಗಾಯತ ಸ್ವಾಮೀಜಿಗಳು ಸಿಎಂ ಪರ ನಿಂತು ಅವರಿಗೆ ಬೆಂಬಲ ಸೂಚಿಸಿದ್ರು. ಈ ಬಗ್ಗೆ ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ಯಡಿಯೂರಪ್ಪ ಸ್ವಾಮೀಜಿಗಳಿಗೆ ನೀಡಿದ ಲಕೋಟೆ ಭರ್ಜರಿ ಸದ್ದು ಮಾಡಿದೆ.

ಈ ಲಕೋಟೆ ವಿಚಾರ ಸಾಕಷ್ಟು ಚರ್ಚೆ ನಡೆಸಿದೆ. ಚೆಕ್ ಇರಬಹುದಾ, ದುಡ್ಡು ಇರಬಹುದಾ, ಏನು ಇರಬಹುದು ಅನ್ನೋ ಚರ್ಚೆ ಮಾಧ್ಯಮಗಳಲ್ಲಿ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿಯೂ ನಡೆದಿದೆ. ಈ ಬಗ್ಗೆ ಮಾತ್ನಾಡಿರುವ ದಿಂಗಾಲೇಶ್ವರ ಸ್ವಾಮೀಜಿ, ಕಾಣಿಕೆ ಕೊಡುವುದು ಸಂಸ್ಕಾರ. ಪಡೆಯುವುದು ಧರ್ಮ. ಜನರಿಗಾಗಿ ಕಾಣಿಕೆ ತೆಗೆದುಕೊಳ್ಳುತ್ತೇವೆ. ಇದಕ್ಕೆ ವಿರೋಧಿಸುವವರು ಸಂಸ್ಕಾರ ಇಲ್ಲದವರು. ಲಕೋಟೆಯಲ್ಲಿ ಏನಿತ್ತು ಅನ್ನೋದು ಗೊತ್ತಿಲ್ಲ. ನಾವು ಯಾರಿಗೂ ಮಾರಾಟವಾಗಿಲ್ಲವೆಂದು ಹೇಳಿದ್ದಾರೆ. ಒಟ್ಟಿನಲ್ಲಿ ಲಕೋಟೆ ರಹಸ್ಯವೇನು ಅನ್ನೋದು ಪ್ರಶ್ನೆಯಾಗಿ ಉಳಿದಿದೆ.


TAG


Leave a Reply

Your email address will not be published. Required fields are marked *

error: Content is protected !!