ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಆಗಸ್ಟ್ 26ರಂದು ಕಾಂಗ್ರೆಸ್ ವತಿಯಿಂದ ಕೊಡಗು ಚಲೋ ಹಮ್ಮಿಕೊಳ್ಳಲಾಗಿದೆ. ಇದರ ನಡುವೆ ಆಗಸ್ಟ್ 24ರಿಂದ 17ರ ತನಕ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಮೂಲಕ ಕಾಂಗ್ರೆಸ್ ಪ್ರತಿಭಟನೆಯ ಕಿಚ್ಚನ್ನು ಆರಿಸುವ ಪ್ರಯತ್ನ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ನಾವು ಹೋರಾಟ ಶುರು ಮಾಡಿದಾಗೆಲ್ಲ 144 ಸೆಕ್ಷನ್ ಹಾಕುವುದು, ನಮ್ಮ ಮೇಲೆ ಕೇಸ್ ಹಾಕುವುದನ್ನೇ ಮಾಡಿಕೊಂಡು ಬರುವುದು ಸರ್ಕಾರದ ಚಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. ನಮ್ಮ ನಡಿಗೆ ಮಡಿಕೇರಿ ಕಡೆಗೆ ಕುರಿತು ನಾಯಕರ ಜೊತೆಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.