ಪಿಸ್ತೂಲ್ ಹಿಡಿದು ಬಿಜೆಪಿ ಮುಖಂಡನ ಮನೆಗೆ ನುಗ್ಗಿದ ದುಷ್ಕರ್ಮಿಗಳು

244

ಪ್ರಜಾಸ್ತ್ರ ಸುದ್ದಿ

ಹಾಸನ: ಹಾಡಹಗಲೇ ಪಿಸ್ತೂಲ್ ಹಿಡಿದು ಬಿಜೆಪಿ ಮುಖಂಡನ ದುಷ್ಕರ್ಮಿಗಳಿಬ್ಬರು ನುಗ್ಗಿದ ಘಟನೆ ನಗರದ ಕೆ.ಆರ್ ಪುರಂನಲ್ಲಿ ನಡೆದಿದೆ. ಡಿ.ಟಿ ಪ್ರಕಾಶ್ ಎಂಬುವರ ಮನೆಗೆ ಇಬ್ಬರು ದುಷ್ಕರ್ಮಿಗಳು ನುಗ್ಗಿದ್ದಾರೆ.

ಪಾರ್ಸಲ್ ನೆಪದಲ್ಲಿ ಮನೆಗೆ ನುಗ್ಗಿದ್ದಾರೆ. ಆಗ ಮನೆಯಲ್ಲಿ ಡಿ.ಟಿ ಪ್ರಕಾಶ್ ಅವರ ತಾಯಿ ರಂಗಮ್ಮ ಇದ್ದು, ಅವರ ಕೈಗೆ ಕವರ್ ಕೊಟ್ಟಿದ್ದಾರೆ. ನಂತರ ಕುತ್ತಿಗೆಗೆ ಕೈ ಹಾಕಿ, ಹಣೆಗೆ ಪಿಸ್ತೂಲ್ ಹಿಡಿದಿದ್ದಾರೆ. ಆಗ ಅವರು ಕಿರುಚಾಡಿದಾಗ ಕಾಂಪೌಂಡ್ ಹಾರಿ ಹೋಗಿದ್ದಾರೆ. ಹಾಸನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


TAG


Leave a Reply

Your email address will not be published. Required fields are marked *

error: Content is protected !!