ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಲಿಫ್ಟ್ ಸಲುವಾಗಿ ತೋಡಲಾಗಿದ್ದ ಗುಂಡಿಯಲ್ಲಿ ಬಿದ್ದ 2 ವರ್ಷದ ಮಗು ಪ್ರಾಣ ಕಳೆದುಕೊಂಡ ಘಟನೆ, ಕೋಡಿಪಾಳ್ಯದಲ್ಲಿ ನಡೆದಿದೆ. 2 ವರ್ಷದ ವಿನೋದಕುಮಾರ ಮೃತ ಮಗುವಾಗಿದೆ. ಕೊಪ್ಪಳ ಮೂಲದ ಅಂಬರೀಶ ಎಂಬುವರ ಮಗು ಸಾವನ್ನಪ್ಪಿದೆ.
ಕೂಲಿ ಕೆಲಸಕ್ಕಾಗಿ ಅಂಬರೀಶ ದಂಪತಿ ಬೆಂಗಳೂರಿಗೆ ಬಂದಿದ್ದಾರೆ. ಈತ ಬಿಜಿಎಸ್ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ. ಹೆಡ್ತಿ ಕೂಲಿ ಕೆಲಸ ಮಾಡ್ತಿದ್ಳು. ಇವರು ವಾಸವಿದ್ದ ಮನೆಯ ಹತ್ತಿರದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಇದಕ್ಕೆ ಲಿಫ್ಟ್ ಅಳವಡಿಸಲು ಗುಂಡಿ ತೋಡಲಾಗಿದೆ. ಇತ್ತೀಚೆಗೆ ಸುರಿದ ಮಳೆಗೆ ಈ ಗುಂಡಿ ತುಂಬಿಕೊಂಡಿತ್ತು.
ತಾಯಿ ಸ್ನಾನಕ್ಕೆ ಹೋದಾಗ ಮಗು ಆಟವಾಡುತ್ತಾ ಬಂದು ಗುಂಡಿಯಲ್ಲಿ ಬಿದ್ದಿದೆ. ಮಕ್ಕಳು ಕೂಗಿ ಕೊಂಡಿವೆ. ತಕ್ಷಣ ಸ್ಥಳೀಯರು ಓಡಿ ಬಂದು ಮಗುವನ್ನ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ರೂ ಮಗು ಬದುಕುಳಿಯಲಿಲ್ಲ. ಲಿಫ್ಟ್ ಗುಂಡಿ ತುಂಬಿದ್ರೂ ಕಟ್ಟಡದ ಮಾಲೀಕ ಹಾಗೂ ಗುತ್ತಿಗೆದಾರ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದ ಪರಿಣಾಮ, ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.