ಪ್ರಜಾಸ್ತ್ರ ಅಪರಾಧ ಸುದ್ದಿ
ಹೈದ್ರಾಬಾದ್: ಇಡೀ ದೇಶವನ್ನ ಬೆಚ್ಚಿಬೀಳಿಸಿದ್ದ ಘಟನೆ ಇದು. ಒಂದು ಕೊಲೆಯನ್ನ ಮುಚ್ಚಿಡುವ ಸಲುವಾಗಿ 9 ಜನರು ಸೇರಿದಂತೆ 10 ಕೊಲೆ ಮಾಡಿದ್ದ ನರಹಂತಕನಿಗೆ ವಾರಂಗಲ್ ಸ್ಥಳೀಯ ಕೋರ್ಟ್ ಮರಣ ದಂಡನೆ ವಿಧಿಸಿದೆ.
24 ವರ್ಷದ ಅಪರಾಧಿ ಸಂಜಯಕುಮಾರ ಯಾದವಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಈತ ಗೋಣಿಚೀಲ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಇವನಿಗೆ ತನ್ಗಿಂತ ಹಿರಿಯಳು ಹಾಗೂ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ್ದ. ನಂತರ ಆಕೆಯ ಮಗಳ ಮೇಲೆ ಮನಸ್ಸು ಮಾಡಿದ್ದ. ಹೀಗಾಗಿ ಆಕೆ ಇವನಿಗೆ ಬೈದು ಹೆದರಿಸಿದ್ಳು.
ಇದ್ರಿಂದಾಗಿ ಸಂಜಯಕುಮಾರ ಸ್ಕೆಚ್ ಹಾಕಿ, ನಮ್ಮ ಕುಟುಂಬಸ್ಥರನ್ನ ಭೇಟಿ ಮಾಡಿಸಿ ಮದುವೆ ಬಗ್ಗೆ ಮಾತ್ನಾಡಿಕೊಂಡು ಬರೋಣ ಬಾ ಎಂದು ಬಿಹಾರಕ್ಕೆ ಕರೆದುಕೊಂಡು ಹೋಗುವಂತೆ ನಟಿಸಿ, ಆಂಧ್ರ ಪಶ್ಚಿಮ ಗೋಧಾವರಿಯಲ್ಲಿ ಚಲಿಸ್ತಿದ್ದ ರೈಲಿನಿಂದ ಆಕೆಯನ್ನ ತಳ್ಳಿ ಸಾಯಿಸಿದ್ದ. ದಿನಗಳು ಕಳೆದಂತೆ ತಾನು ವಾಸವಿದ್ದ ಜನರಿಗೆ ಅನುಮಾನ ಬರ್ತಿದ್ದಂತೆ ಊಟದಲ್ಲಿ ವಿಷ ಹಾಕಿ ಒಂದೇ ಕುಟುಂಬದ 7 ಜನರು ಹಾಗೂ ಪಕ್ಕದ ಮನೆಯ 2 ಹುಡ್ಗರನ್ನ ಹತ್ಯೆ ಮಾಡಿದ್ದ. ಬಳಿಕ ಬಾವಿಯಲ್ಲಿ ಬಿಸಾಕಿದ್ದ. ಲಾಕ್ ಡೌನ್ ವೇಳೆ ಈ ಕೃತ್ಯ ಬಯಲಾಗಿತ್ತು.
ಇಂಥಾ ನರಹಂತಕ ಅಪರಾಧಿ ಸಂಜಯಕುಮಾರನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.