ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ 5 ಗ್ಯಾರೆಂಟಿಗಳ ಭರವಸೆ ಭರ್ಜರಿ ವರ್ಕೌಟ್ ಆಯಿತು. ಅದರಂತೆ ತೆಲಂಗಾಣದಲ್ಲಿ ಪ್ರಯೋಗ ಮಾಡಿ ಕಾಂಗ್ರೆಸ್ ಯಶಸ್ವಿಯಾಗಿದೆ. ನೂತನ ಮುಖ್ಯಮಂತ್ರಿ ರೇವಂತಿ ರೆಡ್ಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಗೆ ಇಂದು ಚಾಲನೆ ನೀಡುತ್ತಿದ್ದಾರೆ.
ಅಧಿಕಾರ ಸ್ವೀಕರಿಸಿ ಮೂರೇ ದಿನದಲ್ಲಿ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುತ್ತಿದ್ದಾರೆ. ಈ ಮೂಲಕ ಇಂದಿನಿಂದ ತೆಲಂಗಾಣದಲ್ಲಿಯೂ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಬಹುದು. ಇನ್ನು ರಾಜೀವ್ ಗಾಂಧಿ ಅವರ ಆರೋಗ್ಯ ಶ್ರೀ ಫಲಾನುಭವಿಗಳಿಗೆ 10 ಲಕ್ಷ ರೂಪಾಯಿ ಜೀವವಿಮಾ ನೀಡಲಿದ್ದಾರೆ.