ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಮೊದಲ ಹಂಡ್ತಿಯ ಮೇಲೆ ಸಂಶಯ ಪಟ್ಟ ಮೂರು ಮಕ್ಕಳ ತಂದೆಯೊಬ್ಬ ಅಪ್ರಾಪ್ತೆಯನ್ನು ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮೊದಲ ಹೆಂಡ್ತಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ.
ಮಹದೇವ ನಗರ ನಿವಾಸಿ ಹನುಮಂತ ಉಪ್ಪಾರ ಎಂಬಾತ 17 ವರ್ಷದ ಬಾಲಕಿಯನ್ನು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಇಡಕಲ್ ಪಡೆಪ್ಪನ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ ಎಂದು ಮೊದಲ ಪತ್ನಿ ನೇತ್ರಾ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಹಣದ ಆಸೆ ತೋರಿಸಿ ಅಪ್ರಾಪ್ತೆಯನ್ನು ಮದುವೆಯಾಗಿದ್ದಾನಂತೆ. ಇದನ್ನು ತಿಳಿದು ಮೊದಲ ಪತ್ನಿ ಎರಡು ದೂರು ದಾಖಲಿಸಿದ್ದಾಳೆ. ಇದೀಗ ಭೂಪ ಹನುಮಂತ ಉಪ್ಪಾರನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.