ಕೊಪ್ಪಳ: ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿ ಹಿಡಿದ ಪರಿಣಾಮ ತಂದೆ ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ ಘಟನೆ ಕುಷ್ಟಗಿ ತಾಲೂಕಿನ ಚಳ್ಳಿಗೇರಿ ಗ್ರಾಮದಲ್ಲಿ ನಡೆದಿದೆ.
ಹೊಲದಿಂದ ಸೂರ್ಯಕಾಂತಿ ರಾಶಿಯನ್ನು ಟ್ರ್ಯಾಕ್ಟರ್ ನಲ್ಲಿ ತೆಗೆದುಕೊಂಡು ಬರುವಾಗ, ಪಕ್ಕದಲ್ಲಿ ಜೋತು ಬಿದ್ದಿದ್ದ ವಿದ್ಯುತ್ ತಂತಿಯನ್ನ ಐದಾರು ವರ್ಷದ ಹುಡ್ಗನೊಬ್ಬ ಮುಟ್ಟಿದಾಗ ವಿದ್ಯುತ್ ತಗುಲಿದೆ. ಆಗ ಹುಡ್ಗ ಚೀರಿಕೊಂಡಿದ್ದಾನೆ. ಇನ್ನೊಬ್ಬ ಹುಡ್ಗ ಅವನನ್ನು ಹಿಡಿದಿದ್ದಾನೆ. ಅವನಿಗೂ ವಿದ್ಯುತ್ ತಗುಲಿದೆ. ಬಳಿಕ ಹುಡ್ಗರಿಬ್ಬರನ್ನ ರಕ್ಷಿಸಲು ತಂದೆ ಟ್ರ್ಯಾಕ್ಟರ್ ನಿಲ್ಲಿಸಿ ಹೋಗಿ ಅವರನ್ನು ಹಿಡಿದಿದ್ದಾರೆ. ಅವರಿಗೂ ವಿದ್ಯುತ್ ತಗುಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಇಡೀ ಗ್ರಾಮದಲ್ಲಿ ನೀರವ ಮೌನ. ಹೆತ್ತ ಕರುಳಿನ ಕೂಗು ಮುಗಿಲು ಮುಟ್ಟಿತ್ತು. ಪುಟ್ಟ ಪುಟ್ಟ ಮಕ್ಕಳ ದುರಂತ ಸಾವು ಪ್ರತಿಯೊಬ್ಬರ ಕಣ್ಣಾಲಿಗೆಗಳನ್ನು ತೇವಗೊಳಿಸಿದ್ವು.