ಪ್ರಜಾಸ್ತ್ರ ಸುದ್ದಿ
ಮಂಗಳೂರು: ಪಿಯು ಕಾಲೇಜ್ ಹಾಸ್ಟೇಲ್ ನ ಮೂವರು ವಿದ್ಯಾರ್ಥಿನಿಯರು ಕಿಟಕಿ ಒಡೆದು ಎಸ್ಕೇಪ್ ಆಗಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಬೆಂಗಳೂರಿನವರಾಗಿದ್ದಾರೆ. ಒಬ್ಬಳು ಚಿತ್ರದುರ್ಗ ಮೂಲದವಳಾಗಿದ್ದಾಳೆ.
ಹೀಗೆ ರೂಮಿನಿಂದ ಎಸ್ಕೇಪ್ ಆದ ವಿದ್ಯಾರ್ಥಿನಿಯರು ನಾವು ಹೋಗುತ್ತಿದ್ದೇವೆ. ಕ್ಷಮಿಸಿ ಎಂದು ಚೀಟಿ ಬರೆದಿಟ್ಟು ಹೋಗಿದ್ದಾರಂತೆ. ಕಂಕನಾಡಿ ನಗರ ಠಾಣೆ ಪೊಲೀಸರು ಮೇರಿಹಿಲ್ ಏರ್ ಪೋರ್ಟ್ ರಸ್ತೆಯ ಖಾಸಗಿ ಕಾಲೇಜಿನ ಹಾಸ್ಟೇಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.