ಪ್ರಜಾಸ್ತ್ರ ಸುದ್ದಿ
ಮೈಸೂರು: ಈಜಲು ಹೋದ ನಾಲ್ವರ ಮಕ್ಕಳು ಮೃತಪಟ್ಟ ದಾರುಣ ಘಟನೆ ತಿ.ನರಸೀಪುರ ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ನಡೆದಿದೆ. ನಿಂಗರಾಜ ಎಂಬುವರ ಮಗ ಕಿಶೋರ(13), ಮಲ್ಲಿಕಾರ್ಜುನ ಎಂಬುವರ ಮಗ ಆಕಾಶ(15), ರಾಜು ಅನ್ನೋರ ಮಗ ಯಶವಂತಕುಮಾರ(15) ಹಾಗೂ ಮಂಚಯ್ಯ ಅನ್ನೋರ ಮಗ ಮಹಾದೇವಪ್ರಸಾದ(14) ಮೃತ ಮಕ್ಕಳು ಎಂದು ತಿಳಿದು ಬಂದಿದೆ.
ಕೆರೆಯಲ್ಲಿ ಈಜಲು ಹೋದಾಗ ಈ ದುರಂತ ಸಂಭವಿಸಿದೆ. ಯಶವಂತಕುಮಾರ ಹಾಗೂ ಮಹಾದೇವಪ್ರಸಾದ ಅನ್ನೋ ಮಕ್ಕಳು ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮಕ್ಕಳ ಮೃತದೇಹ ಶೋಧ ಕಾರ್ಯ ನಡೆದಿದೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.