ಪ್ರಜಾಸ್ತ್ರ ಸುದ್ದಿ
ಮುಂಬೈ: ದೇಶದಲ್ಲಿ ಆಕ್ಸಿಜನ್ ಸಮಸ್ಯೆ ಎಷ್ಟೊಂದು ಆಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇದ್ರಿಂದಾಗಿ ಎಷ್ಟೋ ಕಡೆ ಪ್ರಾಣಗಳೇ ಹೋಗ್ತಿವೆ. ಈ ಬಗ್ಗೆ ಸರ್ಕಾರ ಮೊದ್ಲೇ ಎಚ್ಚೆತ್ತುಕೊಳ್ಳದೆ ಇರೋದು ಇಷ್ಟೊಂದು ಅನಾಹುತಕ್ಕೆ ಕಾರಣ ಎನ್ನಲಾಗ್ತಿದೆ. ಇದರ ನಡುವೆ ಅನೇಕರು ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ.
ಇಲ್ಲೊಬ್ಬರು ತಮ್ಮ ಸ್ವಂತ ಕಾರು ಮಾರಿ ಆಕ್ಸಿಜನ್ ಪೂರೈಕೆ ಮಾಡುವ ಕೆಲಸ ಮಾಡ್ತಿದ್ದಾರೆ. ಶೆಹನಾಜ್ ಶೇಖ್ ಅನ್ನೋರು ತಮ್ಮ 22 ಲಕ್ಷದ ಎಸ್ ಯುವಿ ಕಾರನ್ನ ಮಾರಿ 160 ಆಕ್ಸಿಜನ್ ಸಿಲಿಂಡರ್ ಖರೀದಿ ಮಾಡಿ ನೀಡುವ ವ್ಯವಸ್ಥೆ ಮಾಡ್ತಿದ್ದಾರೆ.
ಕಳೆದ ವರ್ಷ ಶೆಹನಾಜ್ ಅವರ ಪತ್ನಿ ಆಕ್ಸಿಜನ್ ಸಮಸ್ಯೆಯಿಂದ ಪ್ರಾಣ ಕಳೆದುಕೊಂಡಿದ್ದರು. ಇದನ್ನ ಅರಿತ ಅವರು ಜನರಿಗೆ ಸೇವೆ ನೀಡ್ತಿದ್ದಾರೆ. ಇದಕ್ಕಾಗಿ ಸಹಾಯವಾಣಿ ಸಂಖ್ಯೆ ನೀಡಿದ್ದು, ಅವರಿಗೆ 500ಕ್ಕೂ ಹೆಚ್ಚಿನ ಕರೆಗಳು ಬಂದಿವೆ ಎಂದು ತಿಳಿಸಿದ್ದಾರೆ.