ದಿಢೀರ್ ಮಾರ್ಗಸೂಚಿ ಬದಲಾವಣೆ: ಅರ್ಧ ಲಾಕ್ ಡೌನ್ ಗೆ ಜನರು ಹೈರಾಣು

268

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನೈಟ್ ಕರ್ಫ್ಯೂ ಸೇರಿದಂತೆ ವಾರಂತ್ಯದಲ್ಲಿ ಕರ್ಫ್ಯೂ ಜಾರಿ ಮಾಡಿ ಬುಧವಾರ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಇಂದು ದಿಢೀರ್ ಪುರಸ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದ್ರಿಂದಾಗಿ ರಾಜ್ಯಾದ್ಯಂತ ಇಂದು ಮಧ್ಯಾಹ್ನದಿಂದಲೇ ಕೆಲವು ಅಂಗಡಿಗಳನ್ನ ಮುಚ್ಚಿಸಲಾಗಿದೆ.

ದುರಸ್ಥಿ ಕಾರ್ಯಗಳಿಗೆ, ಕೈಗಾರಿಕೆ, ಉತ್ಪದನಾ ಘಟಕಗಳು, ಕೃಷಿ ಚಟುವಟಿಕೆ, ಪಡಿತರ ಅಂಗಡಿ, ಹಾಲು, ಹಣ್ಣು, ತರಕಾರಿ, ಮಾಂಸ, ಬ್ಯಾಂಕ್, ವಿಮಾ ಕಚೇರಿ, ಎಟಿಎಂ, ಷೇರು ವಿನಿಮಯ, ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮ, ಮದುವೆಗೆ 50 ಜನ, ಅಂತ್ಯ ಸಂಸ್ಕಾರಕ್ಕೆ 20 ಜನ, ಮೆಟ್ರೋ, ಬಸ್, ಕ್ಯಾಬ್, ಆಟೋಗಳಿಗೆ ಅನುಮತಿ ನೀಡಲಾಗಿದೆ.

ಶಾಲಾ, ಕಾಲೇಜು, ಕೋಚಿಂಗ್ ಸೆಂಟರ್, ಥಿಯೇಟರ್, ಮಾಲ್, ಜಿಮ್, ಸ್ಪಾ ಸೆಂಟರ್, ಪಾರ್ಕ್, ಧಾರ್ಮಿಕ ಕ್ಷೇತ್ರಗಳು, ಹೋಟೆಲ್, ರೆಸ್ಟೋರೆಂಟ್, ಪಬ್, ಕ್ರೀಡಾಂಗಣ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಮನೋರಂಜನೆಯ ಕಾರ್ಯಕ್ರಮಗಳು ಸೇರಿದಂತೆ ಲಾಡ್ಜ್ ಸೌಲಭ್ಯಕ್ಕೂ ನಿರ್ಬಂಧ ಹೇರಲಾಗಿದೆ.

ಇದರಿಂದಾಗಿ ಇಂದು ಮಧ್ಯಾಹ್ನವೇ ಕಲಬುರಗಿ, ಉಡುಪಿ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಳಗಾವಿ, ಬಳ್ಳಾರಿ, ಬೀದರ ಸೇರಿದಂತೆ ರಾಜ್ಯಾದ್ಯಂತ ನಿರ್ಬಂಧಿತ ಅಂಗಡಿಗಳನ್ನ ಮುಚ್ಚಿಸಲಾಗಿದೆ. ಅನುಮತಿ ನೀಡಿದ ಅಂಗಡಿಗಳನ್ನ ಬಿಡಲಾಗಿದೆ. ಈ ಅರ್ಧ ಲಾಕ್ ಡೌನ್ ಗೆ ಜನರು ಮೊದಲ ದಿನವೇ ಕಂಗಾಲಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!