ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜಧಾನಿಯಲ್ಲಿ ವರುಣನ ಆರ್ಭಟ ಜೋರಾಗಿದೆ. ಒಂದ್ಕಡೆ ಕರೋನಾ ಕಾಟ. ಇನ್ನೊಂದ್ಕಡೆ ಅಕಾಲಿಕ ಮಳೆಯ ಕಾಟ. ಇದರಿಂದಾಗಿ ಸಿಲಿಕಾನ್ ಸಿಟಿಯ ಜನತೆ ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗುರುವಾರ ಮಧ್ಯಾಹ್ನವೇ ಮಳೆ ಕಾಣಿಸಿಕೊಂಡು ಜರನ್ನ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಬಧುವಾರ ತಡರಾತ್ರಿಯೂ ಸಹ ಮಳೆ ಕಾಣಸಿಕೊಂಡಿತ್ತು. ಹವಾಮಾನ ವೈಪರಿತ್ಯದಿಂದಾಗಿ ಇದೀಗ ಮತ್ತೆ ಮಳೆ ಸುರಿಯುತ್ತಿದೆ. ಹೀಗಾಗಿ ಸಹಜವಾಗಿ ಜನಜೀವನ ಅಸ್ತವ್ಯಸ್ಥವಾಗಿದೆ.