‘ಆರ್ಮುಗಂ’ ಹುಟ್ಟು ಹಬ್ಬಕ್ಕೆ ‘ತಲ್ವಾರ್ ಪೇಟೆ’ ಗಿಫ್ಟ್

348

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕಿಚ್ಚ ಸುದೀಪ ಅಭಿನಯದ ಕೆಂಪೇಗೌಡ ಚಿತ್ರದಲ್ಲಿನ ಆರ್ಮುಗಂ ಪಾತ್ರದ ಮೂಲಕ ಖಡಕ್ ವಿಲನ್ ಎಂಟ್ರಿ ಆಯ್ತು. ಅವರೆ ರವಿಶಂಕರ. ಆರ ಅಡಿಗೂ ಹೆಚ್ಚು ಎತ್ತರದ ಅಜಾನುಭಾಹು ಖಳನಾಯಕ, ತಮ್ಮ ವಿಭಿನ್ನ ಸ್ಟೈಲ್ ನಿಂದ ಎಲ್ಲರನ್ನ ರಂಜಿಸ್ತಾ ಬರ್ತಿದ್ದಾರೆ. ಇಂಥಾ ನಟನಿಗೆ ಶನಿವಾರ ಹುಟ್ಟು ಹಬ್ಬದ ಸಂಭ್ರಮ.

ಯೆಸ್, ಖಳನಟ ರವಿಶಂಕರ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ತಲ್ವಾರ್ ಪೇಟೆ ಚಿತ್ರ ತಂಡ ಒಂದು ದಿನ ಮುಂಚಿತವಾಗಿ ಅವರಿಗೆ ಗಿಫ್ಟ್ ವೊಂದು ನೀಡಿದೆ. ಅದುವೆ ಅವರದೊಂದು ಲುಕ್ ರಿಲೀಸ್ ಮಾಡಿದೆ. ವಸಿಷ್ಠಸಿಂಹ ನಾಯಕನಾಗಿ ನಟಿಸ್ತಿರುವ ತಲ್ವಾರ್ ಪೇಟೆ ಚಿತ್ರದಲ್ಲಿ ರವಿಶಂಕರ ಸಹ ಕಾಣಿಸಿಕೊಂಡಿದ್ದಾರೆ.

ಹಳೆ ಕಾಲದ ಬಜಾಜ್ ಗಾಡಿ ಮೇಲೆ ಮೈಕ್ ಸೆಟ್, ಲೈಟಿಂಗ್ಸ್ ಸರ ಹೊತ್ತುಕೊಂಡು ಹೋಗ್ತಿರುವ ಫೋಟೋ ರಿಲೀಸ್ ಮಾಡಿದೆ. ಇವರ ಗೆಟಪ್, ಹಿಂದಿನ ಬ್ಯಾಗ್ರೌಂಡ್ ನೋಡಿದ್ರೆ ಗ್ರಾಮೀಣ ಭಾಗದ ಕಥೆಯನ್ನ ಹೊಂದಿರುವ ಚಿತ್ರವೆಂದು ಕಾಣಿಸುತ್ತೆ. ಕೆ.ರಾಮ ಹಾಗೂ ಶ್ರೀಲಕ್ಷ್ಮಣ ಅನ್ನೋ ಸಹೋದರರು ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ. ವಸಿಷ್ಠ ಸಿಂಹಗೆ ಜೋಡಿಯಾಗಿ ಸೋನಲ್ ಮಂಟೆರಿಯೋ ಕಾಣಿಸಿಕೊಳ್ತಿದ್ದಾಳೆ.




Leave a Reply

Your email address will not be published. Required fields are marked *

error: Content is protected !!