ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಮೂರು ಕೃಷಿ ಮಸೂದೆಗಳನ್ನ ಅಂಗೀಕರಿಸಿದೆ. ಇದನ್ನ ವಿರೋಧಿಸಿ ಹರಿಯಾಣ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳ ರೈತರು ನಿರಂತರವಾಗಿ ಪ್ರತಿಭಟನೆಯನ್ನ ಮಾಡಿಕೊಂಡು ಬರ್ತಿದ್ದಾರೆ. ಅಲ್ದೇ, ದಿಲ್ಲಿ ಚಲೋ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಹರಿಯಾಣ ಗಡಿಯಲ್ಲಿ ಪೊಲೀಸರೊಂದಿಗೆ ಶುಕ್ರವಾರ ಪೂರ್ತಿ ಸಂಘರ್ಷ ನಡೆದಿದೆ. ಜಲ ಫಿರಂಗಿ, ಟಿಯರ್ ಗ್ಯಾಸ್ ಬಳಸಿದ್ರೂ ರೈತ ಜಗ್ಗಲಿಲ್ಲ. ಅಪಾರ ಪ್ರಮಾಣದಲ್ಲಿ ಸೇರಿದ ಜನರನ್ನ ನಿಯಂತ್ರಿಸಲು ಪೊಲೀಸರಿಂದ, ಮೀಸಲು ಪಡೆಯಿಂದ ಆಗ್ಲಿಲ್ಲ. ಕೊನೆಗೂ ದೆಹಲಿ ಪ್ರವೇಶಿಸಲು ಅನುಮತಿ ನೀಡಲಾಗಿದೆ.
ಈಗಾಗ್ಲೇ ಸಾವಿರಾರು ಸಂಖ್ಯೆಯಲ್ಲಿ ರೈತರು ದೆಹಲಿ ಪ್ರವೇಶ ಮಾಡಿದ್ದಾರೆ. ಭಾನುವಾರ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಇಂದು ಮತ್ತು ನಾಳೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ದೊಡ್ಡ ಆಂದೋಲನವನ್ನೇ ನಿರ್ಮಿಸಲಾಗಿದೆ. ಇನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಡಿಸೆಂಬರ್ 3ರಂದು ಚರ್ಚಗೆ ಸಿದ್ಧರಿದ್ದಾರೆ ಎಂದು ತಿಳಿದು ಬಂದಿದೆ.