ಪ್ರಜಾಸ್ತ್ರ ಸುದ್ದಿ
ನವದೆಹಲಿ: ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಇಂಡಿಯಾ ಒಕ್ಕೂಟ ಪ್ರತಿಭಟನೆ ನಡೆಸಿದೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತಿ ಮಾಡಲಾಗಿದೆ.
ಕೆಲ ಷರತ್ತುಗಳೊಂದಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ. ಟ್ರ್ಯಾಕ್ಟರ್ ರ್ಯಾಲಿ, ಶಸ್ತ್ರಾಸ್ತ್ರ ಬಳಕೆಗೆ ಅನುಮತಿ ಇಲ್ಲ. ಮೈದಾನದ ಸುತ್ತಮುತ್ತ ಸಂಚಾರ, ವಾಹನ ನಿಲುಗಡೆ ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರ ಪ್ರವೇಶ ಹಾಗೂ ನಿರ್ಗಮನಕ್ಕಾಗಿ 7 ಗೇಟ್ ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಒಂದು ವಿಐಪಿಗಳಿಗೆ, ಮತ್ತೊಂದು ಮೀಡಿಯಾದವರಿಗೆ ಮೀಸಲು ಇಡಲಾಗಿದೆ.
ಮಿಂಟೋ ರಸ್ತೆ, ರಾಜ್ ಘಾಟ್ ಚೌಕ್, ಮಿರ್ದಾರ್ಡ್ ಚೌಕ್, ದೀನ್ ದಯಾಳ್ ಉಪಾದ್ಯಾಯ ಮಾರ್ಗ, ಪಹರ್ ಗಂಜ್ ಚೌಕ್, ದೆಹಲಿ ಗೇಟ್, ಎ ಪಾಯಿಂಟ್ ರಸ್ತೆಗಳ ಮಾರ್ಗ ಬದಲಾವಣೆ ಮಾಡಲಾಗಿದೆ.