ಭ್ರಷ್ಟಾಚಾರ ರಕ್ಷಣೆಗೆ ಇಂಡಿಯಾ ಮೈತ್ರಿ: ಪ್ರಧಾನಿ ಮೋದಿ

71

ಪ್ರಜಾಸ್ತ್ರ ಸುದ್ದಿ

ನಾಂದೇಡ್: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮಹಾರಾಷ್ಟ್ರದ ನಾಂದೇಡ್ ದಲ್ಲಿ ನಡೆದ ರ್ಯಾಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ವೇಳೆ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಅಮೇಠಿಯಿಂದ ಹೊರ ನಡೆದಂತೆ ವಯನಾಡಿನಿಂದಲೂ ಯುವರಾಝ ತೆರಳುತ್ತಾರೆ. ಇಂಡಿಯಾ ಮೈತ್ರಿ ಕೂಟವನ್ನು ಭಾರತೀಯರು ತಿರಸ್ಕರಿಸುತ್ತಾರೆ. ಅವರು ತಮ್ಮ ಭ್ರಷ್ಟಾಚಾರನ್ನು ರಕ್ಷಣೆ ಮಾಡಿಕೊಳ್ಳಲು ಒಟ್ಟಾಗಿ ಬರುತ್ತಿದ್ದಾರೆ. ವಿಕಸಿತ ಭಾರತದ ಸಲುವಾಗಿ ಎನ್ ಡಿಎ ಬೆಂಬಲಿಸುತ್ತಾರೆ.

ಯಾವುದೇ ದಾರಿಯಿಲ್ಲದ ಕಾರಣ ಕಾಂಗ್ರೆಸ್ ಯುವರಾಜ ವಯನಾಡ್ ನಿಂದ ಸ್ಪರ್ಧಿಸಿದ್ದಾರೆ. 2019ರಲ್ಲಿ ಅಮೇಠಿ ಬಿಟ್ಟು ಹೋದಂತೆ ವಯನಾಡ್ ಬಿಡುತ್ತಾರೆ. ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಕಾಂಗ್ರೆಸ್ ನಾಯಕರು ಸೋಲನ್ನು ಒಪ್ಪಿಕೊಂಡಿದ್ದಾರೆ.

ದಲಿತರು, ಬಡವರು, ವಂಚಿತರ ಅಭಿವೃದ್ಧಿಗೆ ಕಾಂಗ್ರೆಸ್ ಗೋಡೆಯಾಗಿದೆ. ಅವರು ಯಾವುದೇ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎನ್ನುವ ನಂಬಿಕೆ ಇಲ್ಲ ಹಾಗೂ ಅಭಿವೃದ್ಧಿ ಮಾಡುತ್ತಾರೆ ಎನ್ನುವುದನ್ನ ಒಪ್ಪಲು ಯಾರೂ ತಯಾರಿಲ್ಲ ಎಂದು ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!