ಪ್ರಜಾಸ್ತ್ರ ಸುದ್ದಿ
ನವದೆಹಲಿ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ದೇಶದ ವಿವಿಧ ರಾಜ್ಯಗಳ ರೈತ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸುತ್ತಿವೆ. ಆದರೆ, ರೈತರು ದೆಹಲಿಗೆ ಬರದಂತೆ ಎಲ್ಲೆಡೆ ತಡೆಯನ್ನು ಒಡ್ಡಲಾಗಿದೆ. ಆದರೂ ರೈತರು ಬ್ಯಾರಿಕೇಡ್ ಗಳನ್ನು ನುಗ್ಗಿ ಹೊರಟಿದ್ದಾರೆ.
ಜಿಂದ್, ಅಂಬಾಲಾ, ಫತೇಹಾಬಾದ್, ಸಿರ್ಸಾ ಹಾಗೂ ಕುರುಕ್ಷೇತ್ರ ರಸ್ತೆಗಳಲ್ಲಿ ಮುಳ್ಳಿನ ತಂತಿಗಳನ್ನು ಹಾಕಲಾಗಿದೆ. ಮೊಳೆಗಳನ್ನು ಎಸೆಯಲಾಗಿದೆ. ಹಲವು ರೈತರನ್ನು ವಶಕ್ಕೆ ಪಡೆಯಲಾಗಿದೆ. ದೆಹಲಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಈ ಪ್ರತಿಭಟನೆಯಲ್ಲಿ ದೇಶದ ವಿವಿಧ ರಾಜ್ಯಗಳ 200 ಸಂಘಟನೆಗಳ 25 ಸಾವಿರ ರೈತರು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ದೆಹಲಿ ಪ್ರತಿಭಟನೆ, ಮೆರವಣಿಗೆ, ರ್ಯಾಲಿ, ಟ್ಟ್ರ್ಯಾಕ್ಟರ್ ಗಳನ್ನು ಜನರನ್ನು ಕರೆದುಕೊಂಡು ಹೋಗುವುದನ್ನು ಸಹ ನಿರ್ಬಂಧಿಸಲಾಗಿದೆ.