ಪ್ರಜಾಸ್ತ್ರ ಸುದ್ದಿ
ಸಿಂದಗಿ: ಕಟಾವಿಗೆ ಬಂದ ಕಬ್ಬು ಕಟಾವು ಮಾಡದೆ ವಿಳಂಬ ಮಾಡುತ್ತಿರುವ ಕಡಣಿಯ ಕೆಪಿಆರ್ ಸಕ್ಕರೆ ಕಾರ್ಖಾನೆ ವಿರುದ್ಧ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಿಂದಗಿ ತಾಲೂಕಾಧ್ಯಕ್ಷ ದರೇಪ್ಪಗೌಡ ಎಸ್.ಬಿರಾದಾರ ಇವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ಚಿಕ್ಕಹಾವಳಗಿ, ಕುಮಸಗಿ, ಬಗಲೂರು ದೇವರನೌದಗಿ ಗ್ರಾಮದ ರೈತರ ಪ್ರತಿಭಟನೆ ನಡೆಸಿದರು. ಒಣಗಿ ಹೋಗುತ್ತಿರುವ ಕಬ್ಬುಗಳನ್ನು ಕೂಡಲೇ ಕಟಾವು ಮಾಡಿಸಬೇಕು. ಇದಕ್ಕಾಗಿ ಸರಿಯಾಗಿ ಟೋಳಿ ನಿಯೋಜನೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಹುಕ್ಕೇರಿ ಅವರಿಗೆ ಮನವಿ ಸಲ್ಲಿಸಿದರು. ಒಂದು ವೇಳೆ ಕಟಾವು ಮಾಡದೆ ಇದ್ದರೆ ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಈ ವೇಳೆ ರಮೇಶ ಹೂಗಾರ, ಸಂತೋಷ ಬಸಗೊಂಡ,ಸಿದ್ದನಗೌಡ ಬಿರಾದಾರ, ಅಣ್ಣಾರಾಯಗೌಡ ಬಿರಾದಾರ, ದೇವಿಂದ್ರ, ಶರಣಪ್ಪ ಕಣಮೇಶ್ವರ, ಬಸವರಾಜ ತಾವರಖೇಡ, ಬಾಬು ಕೊಂತ್ತಬರಿ, ಶ್ರೀಮಂತ ದುದ್ದಗಿ, ಹಣಮಂತ್ರರಾಯಗೌಡ ಬಿರಾದಾರ, ಶ್ರೀಪತಿಗೌಡ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.