ಸೆಲ್ಫಿ ಹುಚ್ಚಿಗೆ ಹಬ್ಬದಂದೇ ನಾಲ್ವರ ಸಾವು

411

ಬೆಂಗಳೂರು: ಸೆಲ್ಫಿ ಹುಚ್ಚಿನಿಂದಾಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಬೆಂಗಳೂರು-ತಮಿಳುನಾಡು ಗಡಿಯ ಪಂಬರ್ ಡ್ಯಾಂನಲ್ಲಿ ನಡೆದಿದೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉತ್ತನಾಗಿರಿಯ 14 ವರ್ಷದ ಸಂತೋಷ, 19 ವರ್ಷದ ಸ್ನೇಹಾ, 18 ವರ್ಷದ ಕನೋಧಾ ಹಾಗೂ 20 ವರ್ಷದ ನೀವಿತಾ ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ.

ನೀವಿತಾ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ಳು. ದಸರಾ ರಜೆಗಾಗಿ ಉತ್ತನಾಗಿರಿಯ ಪಂಬರ್ ಅಣಕಟ್ಟೆಗೆ ಒಂದು ದಿನದ ಪ್ರವಾಸಕ್ಕೆ ಬಂದಿದ್ದಾರೆ. ಈ ವೇಳೆ ಹಿನ್ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಹಾಯದಿಂದ ಮೃತದೇಹಗಳನ್ನ ಹೊರತೆಗೆಯಲಾಗಿದೆ. ಇಡೀ ಘಟನೆಯಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.




Leave a Reply

Your email address will not be published. Required fields are marked *

error: Content is protected !!