ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಅಡಿಕೆ ಬೇಯಿಸುವ ಹಂಡೆಗೆ 4 ವರ್ಷದ ಬಾಲಕ ಬಿದ್ದಿದ್ದ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್ 29ರಂದು ನಡೆದಿತ್ತು. ಚಿಕಿತ್ಸೆ ಫಲಿಸದೆ ಬಾಲಕ ಇದೀಗ ಸಾವನ್ನಪ್ಪಿದ್ದಾನೆ.
ಅರೆಕೆರೆ ಗ್ರಾಮದ 4 ವರ್ಷದ ಬಾಲಕ ಧ್ರುವಂತ್ ಆಟವಾಡುತ್ತಾ, ಸಮೀಪದಲ್ಲಿ ಅಡಿಕೆಗೆ ಹಾಲು ಬೇಯಿಸಲು ಹಂಡೆಯನ್ನು ಕುರ್ಚಿಯಿಂದ ಇಣುಕು ನೋಡಲು ಹೋಗಿ ಬಿದ್ದಿದ್ದಾನೆ. ತೀವ್ರ ಸುಟ್ಟು ಗಾಯಗಳಾಗಿದ್ದ ಬಾಲಕನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಈಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.